ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆರು ದಿನಗಳ ನಿರ್ಬಂಧ!

0
183

 

ತಿರುಮಲ: ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಕೆಲವು ಜೀರ್ಣೋದ್ದಾರ ಕೆಲಸಗಳಿರುವುದರಿಂದ ಆಗಸ್ಟ್‌ 11 ರಿಂದ 17 ರವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಈ ಕುರಿತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಹಿತಿ ನೀಡಿದೆ.

ನಿರ್ಬಂಧದ ಈ ಆರು ದಿನಗಳ ಅವಧಿಯಲ್ಲಿ ವೇದ ಝೇಂಕಾರಗಳೊಂದಿಗೆ ತಿರುಪತಿ ತಿಮ್ಮಪ್ಪನ ವಿಗ್ರಹಕ್ಕೆ “ಅಷ್ಟಬಂಧನ ಬಾಲಾಲಯ ಮಹಾಸಂ ಪ್ರೋಕ್ಷಣಮ್‌’ ನಡೆಲಾಗುತ್ತದೆ. ಮತ್ತು ಕೆಲವು ಗಿಡಮೂಲಿಕೆ ಗಳನ್ನು ಉಪಯೋಗಿಸಿ ವಿಗ್ರಹದಲ್ಲಿ ಉಂಟಾಗಿರುವ ಸಣ್ಣಪುಟ್ಟ ಬಿರುಕು ಗಳನ್ನು ಸರಿಮಾಡಲಾಗುತ್ತದೆಂದು ಟಿಟಿಡಿ ಅಧ್ಯಕ್ಷ ಸುಧಾಕರ್ ಯಾದವ್‌ ಮಾಹಿತಿ ನೀಡಿದ್ದಾರೆ.

12 ವರ್ಷಗಳ ನಂತರ ಈ ಪೂಜೆ ನಡೆಸಲಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ಭಕ್ತರಿಗೆ ತಿರುಮಲ ಬೆಟ್ಟಕ್ಕೆ ಪ್ರವೇಶ ನೀಡಲಾಗುವುದಿಲ್ಲ. ದೇಗುಲಕ್ಕೆ ಬರುವ ಎಲ್ಲಾ ಮಾರ್ಗಗಳನ್ನು 10 ಕಿ.ಮೀ. ದೂರದಲ್ಲೇ ಮುಚ್ಚಲಾಗುತ್ತದೆ. ಆ.17ರ ನಂತರ ಮತ್ತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸುಧಾಕರ್ ಯಾದವ್‌ ತಿಳಿಸಿದ್ದಾರೆ.

- Call for authors -

LEAVE A REPLY

Please enter your comment!
Please enter your name here