ದುರಂತ ನಾಯಕನಾದರೆ ರೈತರ 40 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವೇ:ಜೈಟ್ಲಿಗೆ ಸಿಎಂ ತಿರುಗೇಟು

0
36

ನವದಹಲಿ: ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನನಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ಹಿಂದೆ ನಿಂತು ನನಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ನಾನು ಕಣ್ಣೀರು ಸುರಿಸಿರುವುದಕ್ಕೂ ಕಾಂಗ್ರೆಸ್ ಪಕ್ಚಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಬಳಿಕ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ,ನಾನು ನನ್ನ ಕುಟುಂಬ ಅಂದರೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಭಾವನಾತ್ಮಕ ಜೀವಿಯಾದ ನಾನು ಭಾವನೆಗಳನ್ನು ಅದುಮಿಡಲು ಸಾಧ್ಯವಾಗದೆ ಕಣ್ಣೀರು ಸುರಿಸಿದೆ.ಇದಕ್ಕೆ ಮುಖ್ಯ ಕಾರಣ ರಾಜ್ಯದ ಮಾಧ್ಯಮಗಳು. ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ದಿನನಿತ್ಯ ಎಂಬಂತೆ ಮಾಧ್ಯಮಗಳು ನನ್ನ ಟೀಕೆ ಮಾಡುತ್ತಿವೆ.ನಾನು ರೈತರ ಸಾಲ ಮನ್ನಾ ವಿಚಾರದಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಕನಿಷ್ಠ ಮೆಚ್ಚುಗೆ ವ್ಯಕ್ತ ಪಡಿಸುತ್ತಿಲ್ಲ.ಸಮಾಜದ ಒಂದು ವರ್ಗ ನನ್ನನ್ನು ಟೀಕೆ ಮಾಡುತ್ತಿದೆ. ಇದು ನನಗೆ ಅರ್ಥವಾಗುತ್ತಿಲ್ಲ.
ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಿಕೊಂಡ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ.ಸಿದ್ದರಾಮಯ್ಯ ಹಿರಿಯ ಅನುಭವಿ ರಾಜಕಾರಣಿ ಅವರ ತಮ್ಮ ಅನುಭವದ ಮೇಲೆ ಕೆಲವು ಹಿತವಚನ ಹೇಳುತ್ತಾರೆ ಅದನ್ನು ಟೀಕೆ ಎಂದು ನಾನು ಭಾವಿಸುವುದಿಲ್ಲ.2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಸ್ಪರ್ಧಿಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದ್ರು.

ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿಯವರು ತನ್ನನ್ನು ದುರಂತ ನಾಯಕನೆಂದು ಟೀಕಿಸಿದ್ದಾರೆ, ತಾನು ದುರಂತ ನಾಯಕನಾಗಿದ್ದರೆ ರಾಜ್ಯದ ರೈತರ 40 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವಿತ್ತೇ.ಪ್ರಬಲ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಏಕೆ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರೈತರ ಸಾಲ ಮನ್ನಾ ಮಾಡಿರುತ್ತೇನೆ.ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ತನ್ನನ್ನು ನಾಯಕತ್ವ ವಹಿಸಲು ಶರತ್ತು ರಹಿತ ಬೆಂಬಲ ನೀಡಿದರು.ನನಗೆ ಆಡಳಿತ ನಡೆಸಲು ಮುಕ್ತ ಅಧಿಕಾರ ನೀಡಿದ್ದಾರೆ.ನನಗೆ ಕಾಂಗ್ರೆಸ್ ಪಕ್ಷದ ರಾಜ್ಯದ ಅಥವಾ ರಾಷ್ಟ್ರೀಯ ನಾಯಕತ್ವದಿಂದ ಯಾವುದೇ ಸಮಸ್ಯೆ ಇಲ್ಲ ಎಂದ್ರು.

ಇಂದಿನ ಸಭೆಯಲ್ಲಿ ಸರ್ಕಾರದಿಂದ ಸಂಸದರಿಗೆ ಯಾವುದೇ ಐ ಪೋನ್ ನೀಡಿರುವುದಿಲ್ಲ.ಐ ಪೋನ್ ತಾನು ವ್ಯಯಕ್ತಿವಾಗಿ ನೀಡಿರುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡೆದಿರುತ್ತಾರೆ.ತಾನು 2006ರಲ್ಲಿ ತಾನು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿ ತನ್ನ ತಂದೆ ಮಾಜೀ ಪ್ರಧಾನಿ ದೇವೇಗೌಡರಿಗೆ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದನ್ನು ಈಗ ಸರಿ ಪಡಿಸಿ ಕೊಂಡಿರುತ್ತೇನೆ ಎಂದು ತಮ್ಮ ಕಣ್ಣೀರ ಹಿನ್ನಲೆಯನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ವಿವರಿಸಿದ್ರು.

- Call for authors -

LEAVE A REPLY

Please enter your comment!
Please enter your name here