ಫೋಟೋ ಕ್ರೆಡಿಟ್: ಸಿ.ಆರ್ ಸುಪ್ರೀತ್
ಬೆಂಗಳೂರು: ಶತಮಾನದ ಅತಿ ದೀರ್ಘ ಕಾಲದ ಖಗ್ರಾಸ ಚಂದ್ರಗಹಣ ನಡೆಯಿತು. ಹಾಲಿನಂತೆ ಹೊಳೆಯುತ್ತಿದ್ದ ಚಂದಮಾಮ ಕತ್ತಲೆ ಬೆಳಕಿನಾಟದ ಕೆಂಬಣ್ಣದಲ್ಲಿ ಕಂಗೊಳಿಸಿದ.
ಖಗ್ರಾಸ ಚಂದ್ರಗ್ರಹಣ ತಡರಾತ್ರಿ 11.54 ಕ್ಕೆ ಆರಂಭಗೊಂಡಿತು.ಭುವಿಯ ನೆರಳು ಚಂದಿರನ ಅಂಗಳದ ಮೇಲೆ ಬೀಳಲು ಶುರುವಾಯಿತು.ರಾತ್ರಿ 1.51 ಕ್ಕೆ ಗ್ರಹಣದ ಮಧ್ಯಭಾಗ ನಡೆದಿದ್ದು ಸರಿಯಾಗಿ 3.49ಕ್ಕೆ ಚಂದಿರನ ಮೇಲಿನ ಭೂಮಿಯ ನೆರಳು ಸಂಪೂರ್ಣ ಸರಿಯಿತು. ಒಟ್ಟು
3.55 ಗಂಟೆಗಳ ಕಾಲ ದೀರ್ಘಕಾಲದ ಚಂದ್ರಗ್ರಹಣ ನಡೆಯಿತು.
ರಕ್ತ ಚಂದಿರನಂತೆ ಬಾನಂಗಳಲ್ಲಿ ಕಂಡ ಚಂದಿರ ಮೋಡಗಳ ಚಲ್ಲಾಟದ ನಡುವೆ ಆಗಾಗ ಕಂಡು ಮರೆಯಾಗುತ್ತಿದ್ದ.ನಗರದ
ವಿದ್ಯಾಮಂದಿರ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಅಧ್ಯಾಪಕರಾದ ಸಿ.ಆರ್ ಸುಪ್ರೀತ್ ಸೇರಿದಂತೆ ಕೆಲ ಭೌತಶಾಸ್ತ್ರ ಆಸಕ್ತ ಯುವಕರು ತಮ್ಮ ತಮ್ಮ ಮನೆಯ ಮೇಲೆ ಟೆಲಿಸ್ಕೋಪ್ ಇಟ್ಟು ಅಪರೂಪದ ಚಂದ್ರಗ್ರಹಣ ವೀಕ್ಷಿಸಿದರು. ಬಹುತೇಕ ಜನರು ಜವಾಹರ್ ಲಾಲ್ ನೆಹರೂ ತಾರಾಲಯಕ್ಕೆ ಹೋಗಿ ಆಗಸದಲ್ಲಿ ಕಂಡ ಕತ್ತಲೆ ಬೆಳಕಿನ ಚಂದಮಾಮನ ಆಟವನ್ನು ವೀಕ್ಷಿಸಿದ್ರು.









