ಕಂದಕಕ್ಕೆ ಉರುಳಿದ ಬಸ್: 33 ಮಂದಿ ಉಪನ್ಯಾಸಕರು ದುರ್ಮರಣ

0
306

ಮಹಾರಾಷ್ಟ್ರ: ಪ್ರವಾಸಕ್ಕೆ ತೆರಳಿದ 34 ಉಪನ್ಯಾಸಕರಿದ್ದ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಬಿದ್ದು 33 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪವಾಡದ ರೀತಿಯಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾಪೋಲಿ ಕೃಷಿ ವಿವಿಯ ಉಪನ್ಯಾಸಕರು ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಮಹಾಬಲೇಶ್ವರದ ಪೋಲಾದ್‌ಪುರ್‌ ಘಾಟ್‌ನಲ್ಲಿ ಕಂದಕಕ್ಕೆ ಉರುಳಿದೆ. ಸುಮಾರು 300 ಅಡಿ ಆಳಕ್ಕೆ ಬಸ್ ಬಿದ್ದಿರುವುದರಿಂದ ಹಲವು ಜನರು ಬಂಡೆಗಳ ಕೆಳಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ‌ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

- Call for authors -

LEAVE A REPLY

Please enter your comment!
Please enter your name here