ಮೈತ್ರಿ ಸರ್ಕಾರದಿಂದ ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ!

0
264

ಬೆಂಗಳೂರು: ಆಡಳಿತ ವರ್ಗಕ್ಕೆ ಮೈತ್ರಿ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, ೨೦ ಐಎಎಸ್‌ ಅಧಿಕಾರಿಗಳನ್ನು ನಿನ್ನೆ ವರ್ಗಾವಣೆ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಇಷ್ಟೇ ಪ್ರಮಾಣದಲ್ಲಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿತ್ತು.

ಇದೀಗ ಪುನಃ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕೆಲವು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ

ಸೆಲ್ವಕುಮಾರ್- ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.

ಎಂ‌.ವಿ. ಸಾವಿತ್ರಿ- ಕಾರ್ಯಾದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಇಲಾಖೆ.

ಆರ್. ವಿಶಾಲ್- ಆಯುಕ್ತರು, ಗ್ರಾಮೀಣ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಶೌಚಾಲಯ ಸಂಸ್ಥೆ.

ಸಿ. ಶಿಖಾ- ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ.

ಬಿ.ಎಸ್. ಶೇಖರಪ್ಪ- ನಿರ್ದೇಶಕರು, ಪೌರಡಳಿತ ಇಲಾಖೆ.

ಮನೋಜ್ ಜೈನ್- ವ್ಯವಸ್ಥಾಪಕ ನಿದೇರ್ಶಕರು, ಕರ್ನಾಟಕ ಲೋಕೋಪಯೋಗಿ ಭೂ ನಿಗಮ.

ಪಿ. ರಾಜೇಂದ್ರ ಚೋಳನ್- ವ್ಯವಸ್ಥಾಪಕ ನಿದೇರ್ಶಕರು, ಅಗ್ನೇಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ.

ಟಿ.ಹೆಚ್.ಎಂ .ಕುಮಾರ್- ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ.

ಎಂ. ಕನಗವಲ್ಲಿ. ನಿದೇರ್ಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ.

ಎಂ.ಜಿ.ಹಿರೇಮಠ- ಜಿಲ್ಲಾಧಿಕಾರಿ, ಗದಗ.

ಕೆ.ಎ. ದಯಾನಂದ- ಜಿಲ್ಲಾಧಿಕಾರಿ, ಚಿಕ್ಕಮಗಳೂರು.

ಪಮ್ಮಳ ಸುನಿಲ್ ಕುಮಾರ್- ಜಿಲ್ಲಾಧಿಕಾರಿ- ಕೊಪ್ಪಳ

ಸುದರ್ಶನ್ ಬಾಬು. ಎಂ- ವ್ಯವಸ್ಥಾಪಕ ನಿದೇರ್ಶಕರು, ಹೆಸ್ಕಾಂ( ಹುಬ್ಬಳ್ಳಿ)

ಚಾರುಲತಾ ಸೋಮಲ್- ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ.

ಸುರಲ್ಕರ್ ವಿಕಾಸ್ ಕಿಶೋರ್- ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ( ಕಲಬುರಗಿ).

ಡಾ. ಅರುಂಧತಿ ಚಂದ್ರಶೇಖರ್- ನಿದೇರ್ಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಸಿ.ಎನ್. ಮೀರಾ ನಾಗರಾಜ್- ಉಪ ಕಾರ್ಯದರ್ಶಿ, ಮುಖ್ಯ ಮಂತ್ರಿಗಳು.

ಗಂಗೂಬಾಯಿ ರಮೇಶ್ ಮಣಕರ್- ಸಿಇಓ, ಬಾಗಲಕೋಟ ಜಿಲ್ಲಾ ಪಂಚಾಯತ್.

ಮಹೇಂತೇಶ್ ಬಿಳಗಿ- ಸಿಇಓ, ವಿಜಯಪುರ ಜಿಲ್ಲಾ ಪಂಚಾಯತ್.

ಸೋಮವಾರ ಸಂಜೆ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಸಂಜೆ ಹೊರಡಿಸಿದ್ದ ಆದೇಶವನ್ನು ತಡರಾತ್ರಿ ಬದಲಾಯಿಸಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಶ್ರೀರಂಗಯ್ಯ ಮುಂದುವರೆದಿದ್ದಾರೆ. ಈ ಹುದ್ದೆಗೆ ವರ್ಗಾಯಿಸಿದ್ದ ಕೆ.ಎ.ದಯಾನಂದ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸದ್ಯ ಶಿವಮೊಗ್ಗ ಡಿ.ಸಿ.ಯಾಗಿರುವ ಲೋಕೇಶ್ ಅವರಿಗೆ ಯಾವುದೇ ಸ್ಥಾನ ತೋರಿಸಿಲ್ಲ. ದಯಾನಂದ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಂತಹ ಮಹತ್ವದ ಹುದ್ದೆಯಲ್ಲಿದ್ದವರು.

- Call for authors -

LEAVE A REPLY

Please enter your comment!
Please enter your name here