ಪುತ್ರನ ಕಂಕಣಭಾಗ್ಯಕ್ಕೆ ಅಮರಾವತಿಗೆ ಭೇಟಿ ನೀಡಿದರಾ ಸಿಎಂ ಕುಮಾರಸ್ವಾಮಿ ದಂಪತಿ?

0
3843

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಕುಟುಂಬ ಸಮೇತ ಅಮರಾವತಿಗೆ ಭೇಟಿ ನೀಡುತ್ತಿದ್ದಾರೆ. ಕನಕ ದುರ್ಗಾದೇವಿ ದರ್ಶನ ಮಾಡುತ್ತಿದ್ದಾರೆ.ಅರೆ ಇದೇನು ಮತ್ತೆ ಸಿಎಂ ಟೆಂಪಲ್ ರನ್ ಅನ್ಕೊಂಡ್ರಾ ಹಾಗಾದ್ರೆ ನಿಮ್ಮ ಊಹೆ ತಪ್ಪು.ರಾಜಕೀಯ ಕಾರಣಕ್ಕೂ ಅಲ್ಲ ಪುತ್ರನ ಹೊಸ ಸಿನಿಮಾದ ಕಥೆಗೂ ಈ ಭೇಟಿ ಮಾಡುತ್ತಿಲ್ಲ.

ಹೌದು ಕುಮಾರಸ್ವಾಮಿ ದಂಪತಿ ಆಂಧ್ರಪ್ರದೇಶದ ಅಮರಾವತಿಗೆ ತೆರಳುತ್ತಿದೆ.ಅಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರೋ ಹಿನ್ನೆಲೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಸಿಎಂ ಟೆಂಪಲ್ ರನ್ ನ ಮುಂದುವರಿದ ಭಾಗ ಅಲ್ಲವೇ ಅಲ್ಲ,ಯಾವುದೇ ಹರಕೆ ತೀರಿಸಲೂ ಹೆಚ್ಡಿಕೆ ದಂಪತಿ ಹೋಗುತ್ತಿಲ್ಲ,ಯಾವುದೇ ರಾಜಕೀಯ ಕಾರಣಕ್ಕೂ ಅಲ್ಲ ಈ ಭೇಟಿ,ತೃತೀಯ ರಂಗದ ಬಗ್ಗೆಯೂ ಇಲ್ಲ ಇಲ್ಲಿ ಚರ್ಚೆ,ಆದರೂ ಅತೀವ ಸಂತಸದಲ್ಲಿ ಹೋಗಿದ್ದಾರೆ ಸಿಎಂ ಕುಮಾರಸ್ವಾಮಿ,ಬಹುದಿನಗಳ ಸಿಎಂ ದಂಪತಿಗಳ ಕನಸು ನನಾಗಿಸಲು ಈ ಪ್ರಯಾಣ ಕೈಗೊಳ್ಳಲಾಗಿದೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸವೆ.

ಆ ಕನಸು ಯಾವುದು ಗೊತ್ತಾ ?

ಈ ಸಂತಸದ ಸುದ್ದಿ ಪುತ್ರ ನಿಖಿಲ್ ಗೆ ಹುಡುಗಿ ನೋಡಲು ಹೋಗುತ್ತಿದ್ದಾರೆ ಸಿಎಂ ಕುಮಾರಸ್ವಾಮಿ. ಆಂದ್ರದಲ್ಲಿರುವ ಕರ್ನಾಟಕ ಮೂಲದವರ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂದು ಆಂಧ್ರದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಇಂದು ಅನೌಪಚಾರಿಕ ಮಾತುಕತೆ ನಡೆಯಲಿದೆ ಮುಹೂರ್ತ ನೋಡಿ ಎರಡೂ ಕುಟುಂಬದವರು ಸೇರಿ ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ ಮುಂದಿನ ತಿಂಗಳು ದೇವೇಗೌಡರ ಕುಟುಂಬ ಸದಸ್ಯರೆಲ್ಲ ತೆರಳಿ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಸಿಎಂ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.


ಆಂಧ್ರ ಭೇಟಿ ಹಿನ್ನಲೆ ಸಹಜವಾಗಿಯೇ ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.ಮಧ್ಯಾಹ್ನದ ಒಳಗೆ ಕನಕದುರ್ಗಾದೇವಿ ದರ್ಶನ ಮಾಡಿ ನಂತರ ಅನೌಪಚಾರಿಕವಾಗಿ ಹುಡುಗಿ ನೋಡುವ ಕಾರ್ಯವನ್ನು ಗೌಪ್ಯವಾಗಿ ನಡೆಸಲಾಗುತ್ತದೆ ಎನ್ನಲಾಗಿದೆ.

- Call for authors -

LEAVE A REPLY

Please enter your comment!
Please enter your name here