ಬಾನಂಗಳದಲ್ಲಿ ಭಾಸ್ಕರನ ಕಣ್ಣಾ ಮುಚ್ಚಾಲೆ: ಖಗೋಳ ಕೌತುಖದ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡ ಸಿಲಿಕಾನ್ ಸಿಟಿ ಜನ

0
2

ಬೆಂಗಳೂರು: ನಗರದಲ್ಲಿಂದು ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದೆ. ಸುಮಾರು ಮೂರುವರೆ ತಾಸು ಸೂರ್ಯಗ್ರಹಣ ಗೋಚರವಾಗಿದ್ದು, ಮೋಡಗಳ ಮಧ್ಯೆ ಆಗಾಗ ಸೂರ್ಯ ಗೋಚರವಾಗಿದ್ದಾನೆ.

ಇಂದು ಜಗತ್ತಿನ್ನೆಲ್ಲೆಡೆ ಸೂರ್ಯಗ್ರಹಣ ಸಂಭವಿಸಿದೆ. ಬೆಂಗಳೂರಿನಲ್ಲೂ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದ್ದು, ಶೇಕಡಾ 37ರಷ್ಟು ಗ್ರಹಣ ಗೋಚರವಾಗಿದೆ. ಬೆಳಗ್ಗೆ 10.13ಕ್ಕೆ ಆರಂಭವಾದ ಸೂರ್ಯ ಗ್ರಹಣ, 11.46ಕ್ಕೆ ತೀವ್ರ ಮಟ್ಟದಲ್ಲಿತ್ತು. 1.31ಕ್ಕೆ ಗ್ರಹಣ ಮೋಕ್ಷವಾಗಿದೆ. ಅಲ್ಲದೆ ಇಂದು ಸೂರ್ಯಗ್ರಹಣ ಹೆಚ್ಚು ಮೋಡಗಳುದೆ ಇದ್ದುದ್ದರಿಂದ ಉತ್ತಮವಾಗೇ ಗ್ರಹಾಣ ಗೋಚರವಾಗಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗಾಗಿ ಸಿಲೋಸ್ಟ್ಯಾಟ್ ಡ್ರೈವ್ ಗಳನ್ನ ಅಳವಡಿಸಲಾಸಲಾಗಿತ್ತು.

ಖಗೋಳ ಕೌತುಕವನ್ನ ಕಣ್ತುಂಬಿಕೊಳ್ಳಬೇಕು ಅಂತಾ ಅದೆಷ್ಟು ಜನ ಕಾಯ್ತಿರ್ತಾರೆ. ಸೂರ್ಯ ಗ್ರಹಣ ಚಂದ್ರ ಗ್ರಹಣಗಳು ಸಂಭವಿಸಿದಾಗ ನೆಹರು ತಾರಾಲಯಕ್ಕೆ ಸಾವಿರಾರು ಜನರು ಬಂದು ಗ್ರಹಣ ವೀಕ್ಷಿಸುತ್ತಿದ್ದಾರೆ. ಆದ್ರೆ, ಈ ಬಾರಿ ಗ್ರಹಣ ವೀಕ್ಷಣೆಗೆ ಕೊರೋನಾ ಗ್ರಹಣ ಹಿಡಿಸಿದೆ. ಕೊರೋನಾ ಭೀತಿ ಹಿನ್ನೆಲೆ ಇಂದು ಸೂರ್ಯ ಗ್ರಹಣ ವೀಕ್ಷಣೆಗೆ ನೆಹರು ತಾರಾಲಯ ಸಾರ್ವಜನಿಕರಿಗರ ಪ್ರವೇಶ ನೀಡಿಲ್ಲ. ಆದ್ರೆ, ತಾರಾಲಯದ ವೆಬ್ ಸೈಟ್ ನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

- Call for authors -

LEAVE A REPLY

Please enter your comment!
Please enter your name here