ಮೋದಿ ದೇಶದ ಅತ್ಯಂತ ಬೇಜವಾಬ್ದಾರಿ ಪ್ರಧಾನ ಮಂತ್ರಿ: ಎಸ್.ಆರ್.ಹಿರೇಮಠ್ ಆರೋಪ

0
4

ರಾಯಚೂರು: ನರೇಂದ್ರ ಮೋದಿ ದೇಶದ ಅತ್ಯಂತ ಬೇಜವಾಬ್ದಾರಿ ಪ್ರಧಾನ ಮಂತ್ರಿಯಾಗಿದ್ದಾರೆ. ಅವರ ಮೂರ್ಖತನದಿಂದಾಗಿ ದೇಶದ ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್. ಆರ್. ಹಿರೇಮಠ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಹಿರೇಮಠ್, ಕೊರೋನಾ ತಡೆಗಾಗಿ ದಿಡೀರನೆ ಲಾಕ್ ಡೌನ್ ಘೋಷಿಸಿದರು. ದುಡಿಯಲು ಹೋಗಿರುವ ವಲಸೆ ಕಾರ್ಮಿಕರಿಗೆ ಕೇವಲ ನಾಲ್ಕು ತಾಸು ಅವಧಿಯಲ್ಲಿ ಸ್ವಗ್ರಾಮಕ್ಕೆ ಮರಳಲು ಸೂಚಿಸಿದ್ದರಿಂದ ಸಾಕಷ್ಟು ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗದಿಂದಾಗಿ ದುಡಿಮೆಗಾಗಿ ಜನ ವಲಸೆ ಹೋಗುತ್ತಿದ್ದಾರೆ ಅವರಿಗೆ ಭದ್ರತೆ ಇಲ್ಲ ಎಂದರು.

ಸಂಡೇ ಲಾಕ್ ಡೌನ್ ಮಾಡುವುದು ಅವಶ್ಯವಾಗಿದೆ. ಕೊರೋನಾದಂಥ ಸಂಕಷ್ಟ ಸಮಯದಲ್ಲಿ ಸರಕಾರಗಳೊಂದಿಗೆ ತಡೆಯಲು ಎಲ್ಲಾ ರೀತಿ ಸಹಕಾರ ನೀಡಬೇಕಾಗಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ಕೊರೋನಾ ಸೋಂಕಿತರಿಗಾಗಿ ಖಾಸಗಿ ಆಸ್ಪತ್ರೆಗಳು ಸಹ ಬೆಡ್ ನೀಡುವುದು ಚಿಕಿತ್ಸೆ ನೀಡುವುದು ಅವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

- Call for authors -

LEAVE A REPLY

Please enter your comment!
Please enter your name here