ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ದಿನಾಂಕ ಪ್ರಕಟಿಸಿದ್ದು ಸಂತೋಷ ಹಾಗೂ ಹರ್ಷವನ್ನು ತಂದಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಒಂದು ಶಿಲೆಗೆ ರಜತ ಕವಚ ಲೇಪನ ಮಾಡಿ ಶ್ರೀರಾಮಸೇನೆ ವತಿಯಿಂದ ಅಯೋಧ್ಯೆಗೆ ತಲುಪಿಸುವ ಮಹತ್ವದ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹನುಮಂತನ ಜನ್ಮಸ್ಥಾನದಿಂದ ರಾಮನ ಜನ್ಮಸ್ಥಾನಕ್ಕೆ ಶ್ರೀರಾಮಸೇನೆ ಕೊಡುಗೆ ನೀಡಲು ಮುಂದಾಗಿದ್ದು, ಇದು ಕರ್ನಾಟಕದ ಹೆಮ್ಮೆಯ ವಿಷಯವಾಗಿದ್ದು, ಸುಮಾರು ಐದು ನೂರು ವರ್ಷಗಳ ಹೋರಾಟದ ಪರಿಣಾಮದಿಂದ ಜಯಸಿಕ್ಕಿರುವುದು ವಿಶೇಷವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.









