ತೇಜಸ್ ನಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್!

0
7

ಬೆಂಗಳೂರು: ದೇಶಿಯ ತಂತ್ರಜ್ಞಾನದಿಂದ ಹೆಚ್ಎಎಲ್ ತಯಾರಿಸಿರುವ ತೇಜಸ್ ಲಘು‌ ಯುದ್ದ ವಿಮಾನ ದೇಶದ ರಕ್ಷಣಾ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ರು.

ಏರ್ ಶೋ ಪ್ರದರ್ಶನದ ವೇಳೆ ಭಾರತೀಯ ವಾಯುಪಡೆಯ ಹೆಮ್ಮೆಯ ಲೋಹದ ಹಕ್ಕಿ ತೇಜಸ್ ಹಗುರ ಯುದ್ಧ ವಿಮಾನದಲ್ಲಿ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಹ ಪೈಲಟ್ ಆಗಿ ಪ್ರಯಾಣಿಸಿದರು.ರಕ್ಷಣಾ ಇಲಾಖೆಯ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ವಿಜಯ್ ರಾಘವನ್ ಕೂಡ ತೇಜಸ್ ನಲ್ಲಿ ಪಯಣ ಮಾಡಿದರು.

ತೇಜಸ್ ನಲ್ಲಿ ಹಾರಾಟ ಮುಗಿಸಿ ಮಾತನಾಡಿದ ಜನರಲ್ ರಾವತ್, ದೇಶೀ ನಿರ್ಮಿತ ತೇಜಸ್ ಅದ್ಬುತವಾಗಿದೆ ಗುರಿಯನ್ನು ನಿಖರವಾಗಿ ಮುಟ್ಟಲಿದೆ ಪೈಲಟ್ ಆಗಿದ್ದ ಏರ್ ವೈಸ್ ಮಾರ್ಷಲ್ ತಿವಾರಿ ವಿಮಾನದ ಬಗ್ಗೆ ವಿವರವಾಗಿ ತಿಳಿಸದರು,ಸುಮಾರು ಅರ್ಧ ಗಂಟೆ ಹಾರಾಟ ನಡೆಸಿದೆ ಡೆಫೆನ್ಸ್ ಅವಶ್ಯಕತೆಗೆ ತಕ್ಕ ವಿಮಾನ ಇದಾಗಿದೆ ಎಲ್ಲ ಹವಾಗುಣಕ್ಕೆ ತಕ್ಕಂತೆ ವಿಮಾನ ಡಿಸೈನ್ ಮಾಡಲಾಗಿದೆ ಹಾರಾಟ ನಡೆಸಿ‌ ಖುಷಿಯಾಗಿದೆ ಎಂದ್ರು.

ವಿಮಾನದ ರಡಾರ್ ಮೋಡ್ ಬಹಳ ಚೆನ್ನಾಗಿದೆ
ಈ ಅದ್ಭುತ ವಿಮಾನ ನಿರ್ಮಾಣ ಮಾಡಿದ ಡಿಆರ್ ಡಿಒ ಮತ್ತು ಎಚ್ ಎ ಎಲ್ ಗೆ ಧನ್ಯವಾದ,ಇದು ರಾಷ್ಟಕ್ಕೆ ಯಾವ ರೀತಿ ಸಹಾಯ ಆಗಲಿದೆ ಎಂದು ಏರ್ ಫೋರ್ಸ್ ಹೇಳಲಿದೆ ಇದು ಡೆಫೆನ್ಸ್ ಗೆ ಸೇರಿದರೆ ದೇಶದ ಶಕ್ತಿ ಇಮ್ಮಡಿಯಾಗಲಿದೆ
ವಿಮಾನದ ಕಿಯೋನಿಕ್ಸ್ ಬಹಳ ಅಡ್ವಾನ್ಸ್ಡ್ ಆಗಿದೆ ಎಂದ್ರು.

- Call for authors -

LEAVE A REPLY

Please enter your comment!
Please enter your name here