ಬಿಎಸ್ವೈ ನನ್ನನ್ನು ಬೀದಿಗೆ ತಳ್ಳಿದರು: ಪುಟ್ಟಸ್ವಾಮಿ

0
26

ಬೆಂಗಳೂರು: ರಾಜಕಾರಣದಲ್ಲಿ 40 ವರ್ಷ ದುಡಿದಿದ್ದೇನೆ. ಯಡಿಯೂರಪ್ಪ ಅವರ ಎಲ್ಲಾ ಕಷ್ಟ ಕಾಲದಲ್ಲಿ ಅವರ ಜೊತೆಗಿದ್ದೆ. ಆದ್ರೆ ಈಗ ಕೆ.ಪಿ. ನಂಜುಂಡಿಯನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡುವ ಮೂಲಕ ಯಡಿಯೂರಪ್ಪನವರೇ ನನಗೆ ಅನ್ಯಾಯ ಮಾಡಿದ್ದಾರೆ. ಈ ಎಲ್ಲಾ ಘಟನೆಗಳಿಂದ ಬೇಸತ್ತು ಇಂದು ಒಬಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಿ.ಜೆ.ಪುಟ್ಟಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.

ರಾಜೀನಾಮೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಬಿ.ಜೆ.ಪುಟ್ಟಸ್ವಾಮಿ, ಬಿ.ಎಸ್ ಯಡಿಯೂರಪ್ಪರನ್ನ ದೇವರು ಅಂತ ನಂಬಿದ್ದೆ ಆದರೆ ನನ್ನನ್ನ ಬೀದಿಗೆ ತಳ್ಳಿದ್ದಾರೆ, ಪರಿಷತ್ ಸ್ಥಾನ ನೀಡದೇ ವಂಚನೆ ಮಾಡಿದ್ದಾರೆ ಕೆ.ಪಿ ನಂಜುಡಿಗಿಂತ ನಾನು ಸಮರ್ಥನಲ್ಲವೇ.? ನನಗೂ ಕೆ.ಪಿ ನಂಜುಂಡಿಗೂ ಹೋಲಿಕೆ ಮಾಡೋದಕ್ಕೆ ಸಾಧ್ಯವಿಲ್ಲ, ಅಂತ ಕೆಲಸವನ್ನ ಯಡಿಯೂರಪ್ಪ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪರಿಷತ್ ಸ್ಥಾನ ಕೇಳುವ ಹಕ್ಕು ನನಗಿದೆ ಈಗಿರುವ ಸದಸ್ಯರು ನನಗಿಂತ ಉತ್ತಮರಾ? 40 ವರ್ಷ ರಾಜಕಾರದಲ್ಲಿ ದುಡಿದಿದ್ದೇನೆ,ಎಲ್ಲಾ ಕಾಲದಲ್ಲೂ ಯಡಿಯೂರಪ್ಪ ಜೊತೆಗಿದ್ದೆ, ಯಡಿಯೂರಪ್ಪನವರಿಗೋಸ್ಕರ ಸಿದ್ದರಾಮಯ್ಯ, ಕುಮಾರಸ್ವಾಮಿಯವರ ವಿರೋಧ ಕಟ್ಟಿಕೊಂಡಿದ್ದೇನೆ.‌ಅದ್ರೆ ಇಂದು ಅವರೇ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

- Call for authors -

LEAVE A REPLY

Please enter your comment!
Please enter your name here