ಉಡುಪಿ : ಬಿಜೆಪಿ ವಿರುದ್ದ ರಾಜ್ಯದ ಜನತೆಗೆ ದಂಗೆ ಎಳುವಂತೆ ಕರೆ ನೀಡಬೇಕಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಉಡುಪಿಯ ಕುಂಜಿಬೆಟ್ಟುವಿನ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಸಿ ಎಂ ಕುಮಾರಸ್ವಾಮೀ ಅವರ ವಿರುದ್ದ ದಿಕ್ಕಾರದ ಕೂಗುಗಳನ್ನು ಹಾಕಿ ಆಕ್ರೋಶವ್ಯಕ್ತ ಪಡಿಸಿದ್ರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಈ ಸಂದರ್ಭ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ್ರು, ದೋಸ್ತಿ ಸರಕಾರದ ಒಳಗಿನ ಕಚ್ಚಾಟದಿಂದ ಸಮಿಶ್ರ ಸರಕಾರ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಆದ್ರೆ ಸಿ ಎಂ ಕುಮಾರಸ್ವಾಮೀ ಸಮಿಶ್ರ ಸರಕಾರವನ್ನು ಪತನ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ.
ಬಿಜೆಪಿ ಈವೆರೆಗೆ ಸಮಿಶ್ರ ಸರಕಾರದ ಫಥನಕ್ಕೆ ಕೈ ಹಾಕಿಲ್ಲ. ಸಮಿಶ್ರ ಸರಕಾರದ ಒಳಗಿನ ಕಚಾಟ್ಟದಿಂದ ಸರಕಾರಕ್ಕೆ ಹೊಡೆತ ಬಿದಿದ್ದು ಸಿ ಎಂ ತನ್ನ ಕುರ್ಚಿ ಉಳಿಸಲು ಈ ರೀತಿಯ ಅಪದಾನೆಯನ್ನು ಬಿಜೆಪಿ ಮೇಲೆ ಹೊರಿಸುತ್ತಿದ್ದಾರೆ.
ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕದ ಆರು ಕೋಟಿ ಜನರಿಗೆ ಸರಿಸಮಾನವಾಗಿ ಕೆಲಸ ಮಾಡಬೇಕಾದ ಕುಮಾರಸ್ವಾಮೀ ಎಡಬಿಡಂಗಿತನ ವರ್ತನೆ ತೋರಿಸುತ್ತಿದ್ದಾರೆ. ನಕ್ಸಲೆಟ್ ಸ್ವರೂಪದ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದಾರೆ.
ಇಂತಹ ಮುಖ್ಯ ಮಂತ್ರಿ ನಮ್ಮ ರಾಜ್ಯಕ್ಕೆ ಬೇಕಾ ಎಂಬ ಭಾವನೆ ಜನ ಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ. ಸಿ ಎಂ ಕುಮಾರಸ್ವಾಮೀ ಅವರು ರಾಜ್ಯದ ಜನತೆಯಲ್ಲಿ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಮಾಡಿದ್ರು.
ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂದರ್ಭ ಪ್ರತಿಭಟನೆಯನ್ನುದೇಶಿಸಿ ಮಾತನಾಡಿದ್ರು, ಸಿ ಎಂ ಕುಮಾರಸ್ವಾಮೀ ಕೇವಲ 3 ಜಿಲ್ಲೆಗಳ ಮುಖ್ಯ ಮಂತ್ರಿ. ಈ ಮಾತನ್ನು ಸದಸನದಲ್ಲಿಯೇ ಹೇಳಿದ್ದೇನೆ. ಬಿಜೆಪಿ ವಿರುದ್ದ ದಂಗೆ ಏಳುವಂತೆ ಜನರಿಗೆ ಕರೆ ನೀಡುವುದಾಗಿ ಅವರು ಅವಿವೇಕತನದ ಹೇಳಿಕೆ ನೀಡಿದ್ದಾರೆ. ಒಬ್ಬ ಜವಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯ ಮಂತ್ರಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಕೂಡಲೇ ಕುಮಾರಸ್ವಾಮೀ ಅವರು ರಾಜ್ಯದ ಜನೆತಯಲ್ಲಿ ಕ್ಷಮೆ ಕೇಳ ಬೇಕು ಇಲ್ಲ ತನ್ನ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದ್ರು.
ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಬಿಜೆಪಿ ಜಿಲ್ಲಾದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಶ್ಯಾಮಲ ಕುಂದರ್, ಜಿಲ್ಲಾ ಪಂಚಾಯತ್ ಉಪದ್ಯಾಕ್ಷೆ ಕೆ ಶೀಲಾ ಶೆಟ್ಟಿ, ವೀಣಾ ಶೆಟ್ಟಿ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಯಶ್ಪಾಲ್ ಸುವರ್ಣ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು








