ಬೆಂಗಳೂರು: ಜುಲೈ 25 ರಂದು ಹೈಕಮಾಂಡ್ ನೀಡುವ ಸೂಚನೆ ಪಾಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಎರಡು ವರ್ಷ ತುಂಬುವ ದಿನದಂದೇ ರಾಜೀನಾಮೆ ಖಚಿತವಾಗಿದೆ.
ಕಾಚರಕನಹಳ್ಳಿಯಲ್ಲಿ ಧನ್ವಂತರಿ ಯಾಗದಲ್ಲಿ ಯಡಿಯೂರಪ್ಪ ಭಾಗಿಯಾಗದ್ರು.ಲೋಕಕಲ್ಯಾಣಾರ್ಥವಾಗಿ ನಡೆದ ಹೋಮದಲ್ಲಿ ಪ್ರಾರ್ಥನೆ ಸಲ್ಲಿಸಿದ್ರು. ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ರಾಜೀನಾಮೆ ಸಾಧ್ಯತೆ ಪ್ರಸ್ತಾಪಿಸಿದ್ರು. ನಮ್ಮ ಹೈಕಮಾಂಡ್ ದೇಶದ ಯಾವ ರಾಜ್ಯದಲ್ಲಿಯೂ ಕೊಡದ ಅವಕಾಶ ನನಗೆ ಕೊಟ್ಟಿದೆ.75 ವರ್ಷ ದಾಟಿದ್ರೂ ಸಿಎಂ ಆಗೋ ಅವಕಾಶ ಕೊಟ್ಟಿದ್ದರಿಂದ ಎರಡು ವರ್ಷ ಆಳ್ವಿಕೆ ಮಾಡಿದ್ದೇನೆ, ಈಗ ಅವರು ಏನು ಹೇಳಿತ್ತಾರೋ ಹಾಗೆ ಮಾಡುತ್ತೇನೆ ಎಂದ್ರು.
ಜುಲೈ 25 ರಂದು ಹೈಕಮಾಂಡ್ ಏನು ಸೂಚನೆ ನೀಡುತ್ತದೆಯೋ ಅದರಂತೆ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ರಾಜೀನಾಮೆ ಫಿಕ್ಸ್ ಅಂತಾ ಸುಳಿವು ಕೊಟ್ರು. ಅಲ್ದೆ ಯಾರೂ ಪ್ರತಿಭಟನೆ ಮಾಡದಂತೆ ಮನವಿ ಮಾಡಿದ್ರು.








