ಪ್ರತಿ ದಿನ ತಮಿಳುನಾಡಿಗೆ3 ಟಿಎಂಸಿ ನೀರು: ಸಿಎಂ

0
644

ಬೆಂಗಳೂರು:ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ‌ ಎಚ್ಡಿಕೆ, 90 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದೆ ತಮಿಳುನಾಡಿಗೆ ಪ್ರತೀ ದಿನ 3 ರಿಂದ 4 ಟಿಎಂಸಿ ನೀರು ಬಿಡುತ್ತಿದ್ದೇವೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳು ನಾಡಿಗೆ ನೀರು ಬಿಡುತ್ತಿದ್ದೇವೆ ಇವತ್ತೂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ
ನಮ್ಮ ರೈತರಿಗೆ ಬೇಕಾಗುವಷ್ಟು ನೀರು ರಿಸರ್ವ್ ಇಟ್ಟುಕೊಳ್ಳುವಂತೆ ಹೇಳಿದ್ದೇನೆ ನಮ್ಮ ರೈತರಿಗೆ ಮೊದಲು ನೀರು ಬಿಡುವಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದೇನೆ ಎಂದ್ರು.

ತಮಿಳುನಾಡಿಗೆ ನಾನು ಏನೂ ಹೇಳಿಲ್ಲ ಕಾವೇರಿ ಜಲಾನಯನ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸುವಂತೆಯೂ ಅಧಿಕಾರಿಗಳಿಗೆ ಹೇಳಿದ್ದೇನೆ ಕಳೆದ ಮೂರು ವರ್ಷಗಳಿಂದ ನಮ್ಮ ರೈತರಿಗೆ ನೀರಿಲ್ಲದೆ ತೊಂದರೆಯಾಗಿದೆ.ಹಾಗಾಗಿ ಈ ಬಾರಿ ಉತ್ತಮ ಮಳಯಾಗುತ್ತಿರುವ ಕಾರಣ ಕೆರೆ ಕಟ್ಟೆ‌ ತುಂಬಿಸಲು ಸೂಚನೆ ಕೊಟ್ಟಿರುವುದಾಗಿ ಹೇಳಿದ್ರು.

ಜನತಾ ದರ್ಶನದಿಂದ ಆಡಳಿತ ಯಂತ್ರಕ್ಕೆ ಸಮಸ್ಯೆಯಾಗ್ತಿದೆ
ಪ್ರತೀ ದಿನ ರಾಜ್ಯಾದ್ಯಂತ ಸುಮಾರು ಹತ್ತು ಸಾವಿರ ಜನರು ನಮ್ಮ ಮನೆಗೆ ಬರ್ತಾರೆ ನನ್ನ ಜೇಬಿನಿಂದ ನಾನು ದುಡ್ಡು ಕೊಡ್ತಿದ್ದೇನೆ ನಾನು ಯಾವುದೇ ಸರ್ಕಾರಿ ಸೌಲಭ್ಯ ತೆಗೆದುಕೊಳ್ಳುತ್ತಿಲ್ಲ ಬಜೆಟ್ ಚರ್ಚೆ ವೇಳೆ ಎಲ್ಲವನ್ನೂ ಹೇಳಿದ್ದೇನೆ ದಾಖಲೆಗಳನ್ನ ಒದಗಿಸಿಕೊಂಡು ನಾನು ಮಾತನಾಡಬೇಕಾಗುತ್ತೆ ಮಾಧ್ಯಮದವರನ್ನ ಸ್ಯಾಟಿಸ್ಫೈ ಮಾಡಲು ಇದೆಲ್ಲ ಮಾಡ್ತಿಲ್ಲ ಮಾಧ್ಯಮದವರ ಮೇಲೆ ಮತ್ತೆ ಸಿಎಂ ಸಿಟ್ಟಾದರು.

ಸಿಎಜಿ ವರದಿಯಲ್ಲಿ ಗೃಹ ಇಲಾಖೆ ವೈಫಲ್ಯ ಬಗ್ಗೆ ಪ್ರಸ್ತಾಪವಾಗಿದೆ.ಆದರೆ ಅದೆಲ್ಲಾ ಹಿಂದಿನ ಸರ್ಕಾರದಲ್ಲಿ ಆಗಿರೋದು.ಹಿಂದಿನ ಸರ್ಕಾರದಲ್ಲಿ ಇಲಾಖೆಗೆ ಸೂಕ್ತ ನಿರ್ದೇಶನ ಸಿಕ್ಕಿಲ್ಲ.ಈಗ ನಮ್ಮ ಸರ್ಕಾರದ ವೇಳೆ ಸಿಎಜಿ ವರದಿಯಲ್ಲಿ ಯೋಜನೆಗಳು ಅನುಷ್ಠಾನ ಆಗಿಲ್ಲ ಅಂತ ಹೇಳಿದೆ ನಮ್ಮ ಸರ್ಕಾರ ಸಮಸ್ಯೆ ಬಗೆಹರಿಸಲಿದೆ ಎಂದ್ರು.

- Call for authors -

LEAVE A REPLY

Please enter your comment!
Please enter your name here