ಸಚಿವರ ಮನೆ ತಲುಪಿದ ಕೊರೋನಾ ವೈರಸ್!

0
5

ಬೆಂಗಳೂರು: ಕೊರೋನಾ ವೈರಸ್ ಈಗಾಗಲೇ ಬೆಂಗಳೂರಿನ ಮೂಲೆ ಮೂಲೆಗೂ ಹರಡಿದೆ. ಇದೀಗ ವೈದ್ಯಾಕೀಯ ಶಿಕ್ಷಣ ಸಚಿವ, ಬೆಂಗಳೂರು ಕೋವಿಡ್-19 ಉಸ್ತುವಾರಿ ಡಾ.ಕೆ.ಸುಧಾಕರ್ ನಿವಾಸಕ್ಕೂ ಕೊರೋನಾ ಕಾಲಿಟ್ಟಿದೆ. ಸುಧಾಕರ್ ಮನೆಯ ಅಡುಗೆ ಕೆಲಸದವನಿಗೆ ಕೊರೋನಾ ದೃಢ ಪಟ್ಟಿದೆ.

ಅಲ್ಲದೆ, ಸುಧಾಕರ್ ಅವರ 82 ವರ್ಷದ ತಂದೆ ಆಸ್ಪತ್ರಗೆ ದಾಖಲಾಗಿದ್ದು, ಜ್ವರ ಹಾಗೂ ಕಫದಿಂದ ಬಳಲುತ್ತಿದ್ದಾರೆ, ಕೋವಿಡ್ ಪರೀಕ್ಷೆಯನ್ನೂ ಮಾಡಿಸಲಾಗಿದೆ. ಇದೀಗ ಸುಧಾಕರ್ ಕುಟುಂಬ ಅವರ ತಂದೆಯ ಕೊರೋನಾ ಪರೀಕ್ಷೆ ವರದಿಯ ನಿರೀಕ್ಷೆಯಲ್ಲಿದೆ. ಈ ವಿಚಾರವನ್ನ ಸ್ವತಃ ಸಚಿವ ಸುಧಾಕರ್ ಟ್ವಿಟರ್ ಮೂಲಕ ದೃಢ ಪಡಿಸಿದ್ದಾರೆ.

- Call for authors -

LEAVE A REPLY

Please enter your comment!
Please enter your name here