ಕಸ ವಿಲೇವಾರಿ ಯೋಜನೆಯಲ್ಲಿ ಕೋಟಿ ಕೋಟಿ ಗುಳುಂ: ಸಚಿವ ಜಾರ್ಜ್ ರಾಜೀನಾಮೆಗೆ ಎನ್.ಆರ್ ರಮೇಶ್ ಆಗ್ರಹ

0
20

ಬೆಂಗಳೂರು: ಸಿಲಿಕಾನ್ ಸಿಟಿಯ ಕಸದ ಸಮಸ್ಯೆ ನಿವಾರಣೆ ಯೋಜನೆ ನೆಪದಲ್ಲಿ 40ಕೋಟಿ ತೆರಿಗೆ ಹಣ ಗುಳಂ ಮಾಡಲಾಗಿದ್ದು ಕೋಟಿ‌ ಕೋಟಿ‌ ರೂ.ಗಳ ಹಗರಣದ ರುವಾರಿ ಸಚವ ಕೆ.ಜೆ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್, ಹೈಟೆಕ್ ಬೆಂಗಳೂರು ,ಗಾರ್ಡನ್ ಸಿಟಿ ಬೆಂಗಳೂರು ಖ್ಯಾತಿ ಪಡೆದ ಬೆಂಗಳೂರಿಗೆ ಗಾರ್ಬೇಜ್ ಸಮಸ್ಯೆ ಬಂದಾಗ ಕಸದ ಸಮಸ್ಯೆ ನಿವಾರಣೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಯಿತು .ಅದರೂ ಕಸದ ಸಮಸ್ಯೆಗೆ ಪರಿಹಾರ ಸಿಗದೇ ಬೆಂಗಳೂರು ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಪಡೆಯಿತು.ಯೋಜನೆ ಸಮರ್ಪಕವಾಗಿ ಜಾರಿಗೆ ತರದೇ ಭಷ್ಟಾಚಾರ ಹಗರಣಗಳ ಕೂಪವಾದರೆ ಇನ್ನು ಕಸದ ಸಮಸ್ಯೆ ನಿವಾರಣೆ ಸಾಧ್ಯವೆ ಎಂದು ಪ್ರಶ್ನಿಸಿದರು.

ಬೆಂಗಳೂರು ಸುಂದರವಾಗಿ ಕಾಣಲು ನೆಲದಡಿಯ ಕಸದ ಡಬ್ಬಗಳನ್ನು 200ಕ್ಕೂ ಹೆಚ್ಚು ಕಡೆ ಸ್ಥಾಪಿಸಲು ರಾಜ್ಯ ಸರ್ಕಾರವು ಕೌನ್ನಿಲ್ ಸಭೆಗೆ ತರದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿತ್ತು .ನೆಲದಡಿಯ ಕಸದ ಡಬ್ಬ ಸ್ಥಾಪನೆ ನಿರ್ಮಾಣದಲ್ಲಿ ಪ್ರಥಮ ಹಂತದಿಂದ ಭಷ್ಟಚಾರ ,ಅಧಿಕಾರ ದುರುಪಯೋಗ ಮಾಡಿಕೊಂಡು ಕಾನೂನು ಗಾಳಿಗೆ ತೂರಿ ಟೆಂಡರ್ ನೀಡಲಾಯಿತು.ಜೋನಾಟ ಇನ್ಪೋಟೆಕ್ ಪೈ ಲಿಮಿಟೆಡ್ ಕಂಪನಿಗೆ ಯಾವುದೇ ಆರ್ಹತೆ ಇಲ್ಲದೆ ಇದ್ದರು ಟೆಂಡರ್ ನೀಡಲಾಯಿತು .ಆಯಾ ಸ್ಥಳಕ್ಕೆ ಅನುಗುಣವಾಗಿ 2.5ಹಾಗೂ 1.5ಕ್ಯೂಬಿಕ್ ಮೀಟರ್ ಸಾಮರ್ಥದ ಬಿನ್ ಕಸದ ಡಬ್ಬಗಳನ್ನು ಆಳವಡಿಸಲು ಕ್ರಮ ಕೈಗೊಳ್ಳಲಾಯಿತು. ಉತ್ತಮ ಗುಣಮಟ್ಟದ ಡಬ್ಬಗಳು 50000ಸಾವಿರಕ್ಕೆ ಲಭ್ಯವಿದೆ ,ಅದರೆ ಆರು ಲಕ್ಷ ರೂಪಾಯಿಗಳ ನೀಡಿ ಖರೀದಿಸಲಾಗಿದೆ.400ಪರಿಚರರು ನೇಮಿಸಲಾಗಿದೆ ಸುಳ್ಳು ದಾಖಲೆ ನೀಡಲಾಗಿದೆ ಹಾಗೂ 8 ಲಾರಿ ವಿತ್ ಕ್ರೆನ್ ಸೌಲಭ್ಯದೊಂದಿದೆ ಕಸದ ಡಬ್ಬಗಳ ವಿಲೇವಾರಿ ಮಾಡಲು ಇದೆ ಎಂದು ಪುಸ್ತಕ ದಾಖಲೆಯಲ್ಲಿ ಮಾತ್ರ ಇದೆ .ಎರಡು ಲಾರಿಗಳು ಮಾತ್ರ ಚಾಲನೆಯಲ್ಲಿ ಇದೆ ಎಂದು ಗಂಭೀರ ಆರೋಪ ಮಾಡಿದ್ರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗಿದೆ .ಈ ಹಗರಣ ರೂವಾರಿ ಸಚಿವ ಕೆ.ಜ್.ಜಾರ್ಜ್. ಕೊಡಲೆ ಅವರು ರಾಜೀನಾಮೆ ನೀಡಬೇಕು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ,ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಲೋಕಯುಕ್ತ ,ಎ.ಸಿ.ಬಿ.ಯಲ್ಲಿ ಹಗರಣದ ಬಗ್ಗೆ ದೂರು ನೀಡಲಾಗಿದೆ ಎಂದ್ರು.

- Call for authors -

LEAVE A REPLY

Please enter your comment!
Please enter your name here