ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸಿಇಟಿ ಪರೀಕ್ಷಾ ಕೇಂದ್ರ ಪ್ರವೇಶಿಸಿದ ಡಿಸಿಎಂ

0
1

ಬೆಂಗಳೂರು: ನಗರದ ಜಿಕೆವಿಕೆ ಕ್ಯಾಂಪಸ್’‌ನಲ್ಲಿರುವ ರೈತ ತರಬೇತಿ ಸಂಸ್ಥೆ ಮತ್ತು ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್’ನಲ್ಲಿನ ಸಿಇಟಿ ಕೇಂದ್ರಕ್ಕೆ ಬುಧವಾರ ಬೇಟಿ ನೀಡಿದ ಉಪ ಮುಖ್ಯಮಂತ್ರಿ
ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದ ನಾಲ್ವರು ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು.

ಸ್ವತಃ ಡಿಸಿಎಂ ಅವರೇ ಪಿಪಿಇ ಕಿಟ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಹೋದರಲ್ಲದೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು ಹಾಗೂ ಖುಷಿಯಾಗಿ ಪರೀಕ್ಷೆ ಎದುರಿಸುವಂತೆ ಹೇಳಿದರು. ಜತೆಗೆ, ಅವರಿಗೆ ಒದಗಿಸಲಗಿರುವ ಸೌಲಭ್ಯಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡರು. ರೋಗ ಲಕ್ಷಣ ಇಲ್ಲದ ನಾಲ್ವರು ಕೋವಿಡ್ ಪಾಸಿಟಿವ್ ಪೇಷೆಂಟ್’ಗಳು ಇಲ್ಲಿ ಪರೀಕ್ಷೆ ಬರೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೆ ನಮ್ಮನ್ನು ಆಂಬುಲೆನ್ಸ್ ನಲ್ಲಿ ನಮ್ಮ ಕರೆತರಲಾಯಿತು ಎಂದು ವಿದ್ಯಾರ್ಥಿಗಳು ಉಪ ಮುಖ್ಯಮಂತ್ರಿಗೆ ತಿಳಿಸಿದರು.

ಕೋವಿಡ್ ಸೋಂಕಿನ ನಡುವೆಯೂ ಉತ್ಸಾಹದಿಂದ ಸಿಇಟಿ ಪರೀಕ್ಷೆಗೆ ಹಾಜರಾಗಿರುವ ಆ ವಿದ್ಯಾರ್ಥಿಗಳನ್ನು ಡಿಸಿಎಂ ಅಭಿನಂದಿಸಿದರು. “ನಿಮ್ಮ ಶ್ರದ್ಧೆ, ನಿಮ್ಮ ಕಮಿಟ್’ಮೆಂಟ್ ಬಗ್ಗೆ ತುಂಬಾ ಮೆಚ್ಚುಗೆ ಇದೆ. ಮುಂದಿನ ವಿಷಯಗಳನ್ನು ಉತ್ತಮವಾಗಿ ಎದುರಿಸಿ. ನಿಮಗೆಲ್ಲ ಒಳ್ಳೆಯದೇ ಆಗುತ್ತದೆ” ಎಂದು ಡಿಸಿಎಂ ಶುಭ ಹಾರೈಸಿದರು.

ವೈದ್ಯರೇ ಮೇಲ್ವಿಚಾರಕರು:

ಈ ಪರೀಕ್ಷಾ ಕೇಂದ್ರದಲ್ಲಿ ವೈದ್ಯರೇ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದು ಬಹಳ ವಿಶೇಷ. ವೈದ್ಯರ ಜತೆಗೆ ಒಬ್ಬ ನರ್ಸ್ ಕೂಡ ಇದ್ದರಲ್ಲದೆ, ನಾಲ್ವರಷ್ಟೇ ಬರೆದ ಈ ಪರೀಕ್ಷಾ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ನರ್ಸ್’ ಮತ್ತಿತರೆ ಎಲ್ಲ ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸಿದ ಡಿಸಿಎಂ, ಅವರ ಜತೆಯೂ ಮಾತುಕತೆ ನಡೆಸಿದರು.

“ಯಾವಾಗಲೂ ವೈದ್ಯ ವೃತ್ತಿಯಲ್ಲೇ ಸಂತೋಷ ಕಾಣುತ್ತಿದ್ದ ನಮಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ಮಾಡಿದ್ದೂ ಖುಷಿ ತಂದಿದೆ. ಕೋವಿಡ್-19 ದಂತಹ ಸಂಕಷ್ಟ ಸಮಯದಲ್ಲಿ ಈ ಕೆಲಸವನ್ನು ಮಾಡಲೇಬೇಕಾಯಿತು. ಇದೊಂದು ರೀತಿಯ ಹೊಸ ಅನುಭವ” ಎಂದು ಆ ವೈದ್ಯರು ಹೇಳಿದರು.

- Call for authors -

LEAVE A REPLY

Please enter your comment!
Please enter your name here