ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಕ್ಯಾಂಪಸ್ಸಿನಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರು ಮಂಗಳವಾರ ಒಬ್ಬರೇ ಕಾಲ್ನಡಿಗೆಯಲ್ಲಿ ರೌಂಡ್ಸ್ ಹಾಕಿ ಪರಿಶೀಲಿಸಿದರು.
ಅದಕ್ಕೂ ಮೊದಲು ಮಧ್ಯಾಹ್ನ ಸಮೀಪದಲ್ಲೇ ಇದ್ದ ತಮ್ಮ ಇಲಾಖೆಯ ಸಭೆಯೊಂದರಲ್ಲಿ ಪಾಲ್ಗೊಂಡು ಹೊರಬಂದ ಡಿಸಿಎಂ ನೇರವಾಗಿ ಪಾಲಿಟೆಕ್ನಿಕ್ ಕ್ಯಾಂಪಸ್ಸಿಗೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟರು. ಇಡೀ ಪ್ರದೇಶವನ್ನು ಒಂದು ಸುತ್ತು ಹಾಕಿದ ಅವರು, ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜ್, ಸೆಕ್ರೆಟರಿಯೇಟ್ ಪ್ರಾಕ್ಟೀಸ್ ಕಾಲೇಜ್ ಸೇರಿದಂತೆ ಎಲ್ಲ ಕಡೆಗಳಲ್ಲು ಕಾಲ್ನಡಿಗೆಯಲ್ಲೇ ಸುತ್ತಾಡಿದರು.
ಈ ವೇಳೆಯಲ್ಲಿ ಕ್ಯಾಂಪಸ್ಸಿನ ಸ್ವಚ್ಚತೆ, ಕಟ್ಟಡಗಳು ಮತ್ತು ಪ್ರಯೋಗಾಲಯ, ಹಾಸ್ಟೆಲ್ ಗಳ ನಿರ್ವಹಣೆ ಮುಂತಾದ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರು. ಜತೆಗೆ ಅಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದರು.









