ದೆಹಲಿ ರಾಜಕೀಯ ಪ್ರಹಸನ: ಮೌನ ಮುರಿದ ರಾಹುಲ್

0
17

ನವದೆಹಲಿ : ಕಳೆದ ಒಂದು ವಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯದ ಕುರಿತು ಕೊನೆಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೌನ ಮುರಿದಿದ್ದು, ಟ್ವಿಟ್ಟರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.

ದೆಹಲಿಯಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಇಬ್ಬರೂ ಕಾರಣರಾಗಿದ್ದಾರೆ‌. ಇವರಿಂದ ದೆಹಲಿಯ ಜನರು ಬಲಿಪಶುಗಳಾಗಿದ್ದಾರೆ ಎಂದು ಬಿಜೆಪಿ ಮತ್ತು ಎಎಪಿ ಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್‌ ಟ್ವಿಟರ್‌ ಅಂಶಗಳು

ದಿಲ್ಲಿ ಸಿಎಂ ಎಲ್‌ಜಿ ಕಛೇರಿಯಲ್ಲಿ ಧರಣಿ ಕೂತಿದ್ದಾರೆ;

ಬಿಜೆಪಿ ದಿಲ್ಲಿ ಸಿಎಂ ನಿವಾಸದಲ್ಲಿ ಧರಣಿ ಕೂತಿದೆ;

ದಿಲ್ಲಿ ಸರ್ಕಾರಿ ಅಧಿಕಾರಿಗಳು ಪತ್ರಿಕಾ ಗೋಷ್ಠಿ ನಡೆಸುತ್ತಿದ್ದಾರೆ;

ಈ ಎಲ್ಲ ಅರಾಜಕತೆಗೆ ಪ್ರಧಾನಿ ಕುರಡರಾಗಿದ್ದಾರೆ; ಪರೋಕ್ಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅರಾಜಕತೆ, ಅವ್ಯವಸ್ಥೆಗೆ ಕಾರಣರಾಗಿದ್ದಾರೆ;

ಈ ಎಲ್ಲಾ ಪ್ರಹಸನಗಳಿಂದ ದೆಹಲಿ ಜನರು ಬಲಿಪಶುಗಳಾಗಿದ್ದಾರೆ.

- Call for authors -

LEAVE A REPLY

Please enter your comment!
Please enter your name here