ಫುಟ್‌ಪಾತ್ ತೆರವು, ವ್ಯಾಪಾರಸ್ಥರು ಕಂಗಾಲು: ಪೋಲಿಸಪ್ಪನ ದರ್ಪ!

0
1

ಬಾಗಲಕೋಟೆ: ಫುಟ್ ಪಾತ್ ವ್ಯಾಪಾರಸ್ಥರ ಹಾಗೂ ಅತಿಕ್ರಮಣದಾರರ ಅಂಗಡಿಗಳನ್ನು ನಗರಸಭೆ ವತಿಯಿಂದ ಇಂದು ತೆರವು ಕಾರ್ಯಾಚರಣೆ ಮಾಡಲಾಯಿತು.

ಹಳೇ ಬಾಗಲಕೋಟೆಯ ಎಂಜಿ ರೋಡ್ ನಲ್ಲಿ ಅಂಗಡಿ, ಮುಂಗಟ್ಟುಗಳ ಮುಂದೆ ನೆರಳಿಗಾಗಿ ಹಾಕಿರುವ ತಗಡುಗಳ ಹಾಗೂ ಫುಟ್ ಬಾತ್ ಮೇಲೆ ಹಾಕಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವು ಗೊಳಿಸಲಾಯಿತು. ಈ ವೇಳೆ ತೆರವು ವಿರೋಧಿಸಿ ಅಂಗಡಿ, ಮುಂಗಟ್ಟು ಬಂದ್ ಮಾಡಿ ವ್ಯಾಪಾರಸ್ಥರು ಕೂಡಾ ಕೆಲ ಕಾಲ ಪ್ರತಿಭಟನೆ ಕೂಡಾ ನಡೆಸಿದರು.

ಪ್ರತಿಭಟನೆ ವೇಳೆ ಪೊಲೀಸರು, ನಗರಸಭೆ ಸಿಬ್ಬಂದಿ ಜೊತೆ ಪುಟ್ ಪಾತ್ ವ್ಯಾಪಾರಸ್ಥರು ಮಾತಿನ ಚಕಮಕಿ ನಡೆಸಿದ್ರು. ಲಾಕ್ ಡೌನ್ ನಿಂದ ಮೊದಲೇ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ, ಇಂತಹ ಸಮಯದಲ್ಲಿ ತೆರವು ಕಾರ್ಯಾಚರಣೆ ನೆಪದಲ್ಲಿ ವ್ಯಾಪಾರಸ್ಥರಿಗೆ ಅಧಿಕಾರಿಗಳು ಕಿರುಕುಳ ಕೊಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಇದೇ ಸಂದರ್ಭದಲ್ಲಿ ತೆರವು ನಿಲ್ಲುಸುವಂತೆ ಎಲ್ರೂ ಸೇರಿ ಎಂಎಲ್ ಎ ಸಾಹೇಬ್ರ ಕಡೆ ಹೋಗೋಣ ಎಂದ ಯುವಕನ ಮೇಲೆ ಬಾಗಲಕೋಟೆ ನಗರ ಠಾಣೆ ಪಿಎಸ್ಐ ಜವಳೇಕರ ಕೆಂಡಾಮಂಡಲವಾದ ಘಟನೆಯೂ ಜರುಗಿತು.

ಶಾಸಕರ ಹೆಸರು ಹೇಳುತ್ತಲೆ ಯುವಕನ ಮೇಲೆ ಪಿಎಸ್‌ಐ ಕೆಂಡಾಮಂಡಲವಾದ್ರು‌. ಹೇ ಕೇಳಿಲ್ಲಿ, ನೀ ದೊಡ್ಡದಾಗಿ ಮಾತಾಡಬೇಡ ಇಲ್ಲಿ. ಯಾಂವಂದರ ಏನರ ತಲೆ ತುಂಬಿದಿ ಅಂದ್ರ ನಿನ್ನ ಮೇಲೆ ಕೇಸ್ ಹಾಕ್ತಿನಿ ಯುಸ್ ಲೆಸ್ ಫೆಲೋ. ನಾಟಕ ಹಚ್ಚೀನೂ ಇಲ್ಲಿ ನೀನು ಭಾಳ್ ಮಾತಾಡಬೇಡ ಯೂಸಲೆಸ್ಪೆಲೋ ನಾ ಹೇಳೋದು ಅರ್ಥ ಮಾಡ್ಕೋ ನಿನ್ನ ವಯಸ್ಸಿನ್ನು ನಾಲ್ವತ್ತಾಗಿಲ್ಲ. ಬಾಗಲಕೋಟೆ ನಗರಸಭೆಗೆ ಹೊಸ ಅಧಿಕಾರಿ ಬಂದಾರ, ಅವರು ಏನ್ ಹೇಳ್ತಾರ ಅದರಂಗ ಕೇಳ್ಕೊಬೇಕಾಗುತ್ತ ಅಂತಾ ದರ್ಪ ತೋರಿಸಿದ್ರು…

- Call for authors -

LEAVE A REPLY

Please enter your comment!
Please enter your name here