ನಗರದಲ್ಲಿ ಗಣಪತಿ‌ ಹಬ್ಬದ ಸಂಭ್ರಮ

0
21

ಬೆಂಗಳೂರು: ನಗರದಲ್ಲಿ ಸಡಗರ ಸಂಭ್ರಮದಿಂದ ವಿಘ್ನನಿವಾರಕ ವಿನಾಯಕನ ಹಬ್ಬವನ್ನು ಆಚರಿಸಲಾಯಿತು.ಬೆಳಗ್ಗೆಯೇ ಗಣಪತಿ ಮೂರ್ತಿಗಳನ್ನು ಕೊಂಡೊಯ್ದ ಭಕ್ತರು ಮನೆಗಳಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಿದರು.

ವಿವಿಧ ಸಂಘಗಳು,ಮಂಡಳಿಗಳು ದೊಡ್ಡ ದೊಡ್ಡ‌ ಗಣಪತಿ ಮೂರ್ತಿಗಳನ್ನು ಕೊಂಡೊಯ್ದು ತಮ್ಮ ತಮ್ಮ ಬೀದಿಗಳಲ್ಲಿ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಿದರು.ಜೊತೆಗೆ ಪ್ರಮುಖ ದೇವಾಲಯಗಳಲ್ಲೂ ಅದ್ಧೂರಿಯಿಂದ ಗಣೇಶನ ಹಬ್ಬವನ್ನು ಆಚರಿಸಲಾಯಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದು ವರಸಿದ್ಧಿವಿನಾಯಕನ ದರ್ಶನ ಪಡೆದರು. ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ, ಆರ್ ಟಿ ನಗರದ ವಿನಾಯಕ ದೇವಸ್ಥಾನ, ಜೆಪಿ ನಗರ ಪುಟ್ಟೇನಹಳ್ಳಿಯಲ್ಲಿ ಕಬ್ಬಿನಿಂದ ಅಲಂಕೃತಗೊಂಡ ವಿಶೇಷ ಗಣಪತಿಗೆ ಬೆಳಗ್ಗೆಯಿಂದಲೂ ವಿವಿಧ ಪೂಜೆ ಪುನಸ್ಕಾರಗಳು ನಡೆದವು.

ಭಕ್ತರಿಗೆ ಬೃಹದಾಕಾರದ 4 ಸಾವಿರ ಕೆಜಿ ಲಾಡು ವಿತರಣೆ:

ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ 30 ಅಡಿ ಎತ್ತರದ ಕಬ್ಬಿನ ಗಣಪತಿಗೆ ನೈವೇದ್ಯ ಕ್ಕೆ ಇಟ್ಟಿದ್ದ 4 ಸಾವಿರ ಕೇಜಿಯ ಬೃಹದಾಕಾರದ ಲಾಡು ಅನ್ನು ಇಂದು ಸಂಜೆ ಭಕ್ತರಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಗರದ ಜೆ ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನ ಕಳೆದ ಕೆಲವು ದಿನಗಳಿಂದ ದೇಶ ವಿದೇಶಗಳಲ್ಲಿ ಹೆಸರು ಪಡೆದುಕೊಂಡಿದೆ. ಇದಕ್ಕೆ ಕಾರಣ ಅಲ್ಲಿನ ಆಡಳಿತ ಮಂಡಳಿಯ ಪರಿಸರ ಸ್ನೇಹಿ ಕ್ರಮ ಎಂದರೆ ತಪ್ಪಾಗಲಾರದು. ಭಕ್ತರಿಗೆ ಹೊಸದೊಂದು ಅನುಭವ ನೀಡಬೇಕು ಎನ್ನುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲೆ ಅತಿ ದೊಡ್ಡ ಪರಿಸರ ಸ್ನೇಹಿ ಗಣಪತಿಯನ್ನ ನಿರ್ಮಿಸಲಾಗಿತ್ತು. 30 ಅಡಿ ಎತ್ತರದ ಈ ಕಬ್ಬಿನ ಗಣಪತಿಗೆ 4 ಸಾವಿರ ಕೆಜಿ ತೂಕದ ಬೃಹತ್ ಗಾತ್ರದ ಲಾಡುವನ್ನು ನೈವೇದ್ಯ ಕ್ಕೆ ಇಡಲಾಗಿತ್ತು.

ಮೊದಲೇ ತಿಳಿಸಿದಂತೆ ಇಂದು ಸಂಜೆ ಈ ಬೃಹದಾಕಾರದ ಲಾಡುವನ್ನು ಭಕ್ತರಿಗೆ ಹಂಚುವ ಕೆಲಸಕ್ಕೆ ಚಾಲನೆ ನೀಡಲಾಯಿತು. 11 ದಿನಗಳ ಕಾಲ ಈ ಕಬ್ಬಿನ ಗಣಪತಿಯನ್ನು ಭಕ್ತರ ದರ್ಶನಕ್ಕೆ ಇಡಲಾಗುವುದು. ನಂತರ ಈ ಕಬ್ಬನ್ನು ಭಕ್ತರಿಗೆ ವಿತರಿಸಲಾಗುತ್ತದೆ.

- Call for authors -

LEAVE A REPLY

Please enter your comment!
Please enter your name here