ರಂಗದ ಮೇಲೆ ಅನಾವರಣಗೊಂಡ ಗಾಂಧಿ ಬದುಕಿನ ಹಾದಿ: ರಾಜ್ಯಾದ್ಯಂತ ೪ ತಿಂಗಳ ಸುತ್ತಾಟಕ್ಕೆ ಧಾರವಾಡದಲ್ಲಿ ಚಾಲನೆ

0
16

ಧಾರವಾಡ: ಪಾಪು ಬಾಪುವಾಗಿ ಬೆಳೆದ ಕಥೆಯನ್ನು ರಂಗದ ಮೇಲೆ ಅನಾವರಣಗೊಳಿಸುವ ವಿಭಿನ್ನ ಪ್ರಯತ್ನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ಕೈಗೆತ್ತಿಕೊಂಡಿದೆ.

ಬೊಳುವಾರು ಮಹ್ಮದ್ ಕುಂಇ ಅವರ “ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ” ಆಧರಿಸಿದ ರಂಗರೂಪಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರ ಪರಿಕಲ್ಪನೆ, ಡಾ.ಶ್ರೀಪಾದ ಭಟ್ ಅವರ ನಿರ್ದೇಶನ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ ಶಿಗ್ಗಾಂವ್ ಅವರ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ನಾಡಿನ ವಿವಿಧ ಭಾಗಗಳ ಸುಮಾರು ೩೦ ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಿ, ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದಲ್ಲಿ ಸುಮಾರು ಒಂದು ತಿಂಗಳ ಕಾಲ ತರಬೇತಿ ನೀಡಲಾಗಿದೆ.

ನಿರಂತರ ತಾಲೀಮಿನ ನಂತರ ‘ಗಾಂಧಿ- ೧೫೦ ಒಂದು ರಂಗ ಪಯಣ’ ಎಂಬ ಶೀರ್ಷಿಕೆಯಡಿ ಕಲಾವಿದರನ್ನು ಎರಡು ತಂಡಗಳಾಗಿ ವಿಂಗಡಿಸಿ, ನಾಡಿನಾದ್ಯಂತ ಬರುವ ೪ ತಿಂಗಳವರೆಗೆ ನಿರಂತರವಾಗಿ ೮೦೦ ಕ್ಕೂ ಹೆಚ್ಚು ಪ್ರದರ್ಶನ ನೀಡುವ ಗುರಿ ಹೊಂದಲಾಗಿದೆ.

- Call for authors -

LEAVE A REPLY

Please enter your comment!
Please enter your name here