ಉನ್ನತ ಶಿಕ್ಷಣವಿಲ್ಲದ ನನಗೇಕೆ ಉನ್ನತ ಶಿಕ್ಷಣ ಖಾತೆ ಎಂದ ಜಿಟಿಡಿ ಹೆಗಲೇರಿದ ಖಾತೆ

0
30

ಬೆಂಗಳೂರು:ಕಡೆಗೂ ಉನ್ನತ ಶಿಕ್ಷಣ ಖಾತೆಯೇ ಸಚಿವ ಜಿ.ಟಿ ದೇವೇಗೌಡಗೆ ಪಕ್ಕಾ ಆಯಿತು.ವಿದ್ಯಾರ್ಹತೆ ನೆಪವೊಡ್ಡಿ ಉನ್ನತ ಶಿಕ್ಷಣ ಖಾತೆ ನಿರಾಕರಿಸಿದ್ದ ದೇವೇಗೌಡ ಅವರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ನಿವಾಸಕ್ಕೆ ಇಂದು ಸಚಿವ ಜಿ.ಟಿ ದೇವೇಗೌಡ ಭೇಟಿ ನೀಡಿದ್ರು.ಖಾತೆ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ರು,ಈ ವೇಳೆ ದೇವೇಗೌಡರ ಮನವೊಲಿಸಿದ ಸಿಎಂ ಯಾವುದೇ ಸಂದರ್ಭದಲ್ಲಿ ಬೇಕಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಉನ್ನತ ಶಿಕ್ಷಣ ಇಲಾಖೆ ಖಾತೆಯಲ್ಲೇ ಮುಂದುವರೆಯಿರಿ ಅಂತಾ ಸಲಹೆ ನೀಡಿದ್ರು.

ಇಲಾಖೆ ಬಗ್ಗೆ ಗೊಂದಲ ಬೇಡ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಎದುರಾದ್ರೂ ಖುದ್ದಾಗಿ ಬಗೆಹರಿಸ್ತೀನಿ ಅಂತಾ ಭರವಸೆ ನೀಡುತ್ತಿದ್ದೇನೆ. ಹೀಗಾಗಿ ಶಿಕ್ಷಣ ಕಡಿಮೆ ಇದ್ದರೂ ಪರವಾಗಿಲ್ಲ, ಅನುಭವದ ಆಧಾರದಲ್ಲಿ ಜವಾಬ್ದಾರಿ ನಿರ್ವಹಿಸಬಹುದು ಎಂದು ಸಿಎಂ ಮನವೊಲಿಸಿದ್ರು.

ಖಾತೆ ಬದಲಾಯಿಸಿದರೆ ಮತ್ತೆ ಗೊಂದಲ ಉಂಟಾಗಲಿದೆ.ಬೇರೆ ಸಚಿವರ ಖಾತೆಯನ್ನೂ ಬದಲಿಸಬೇಕಾದ ಅನಿವಾರ್ಯತೆ ಎದುರಾಗತ್ತೆ ಹಾಗಾಗಿ ಈಗ ಇರುವ ಖಾತೆ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಅವ್ರನ್ನ ಒಪ್ಪಿಸಿದ್ರು.

ಖಾತೆ ಹಂಚಿಕೆ ಮಾಡಿದರೂ ಉನ್ನತ ಶಿಕ್ಷಣ ಖಾತೆ ಜವಾಬ್ದಾರಿ ತೆಗೆದುಕೊಳ್ಳದೇ ಬೇರೆ ಖಾತೆಗೆ ಪಟ್ಟು ಹಿಡಿದಿದ್ದ ಸಚಿವ ಜಿ.ಟಿ ದೇವೇಗೌಡ ಸಿಎಂ ಸಲಹೆ ಪರಿಗಣಿಸಿ ಈ ಕ್ಷಣದಿಂದಲೇ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳೋದಾಗಿ ಹೇಳಿದ್ರು.ಆ ಮೂಲಕ ಉನ್ನತ ಶಿಕ್ಷಣ ಖಾತೆ ಹಂಚಿಕೆ ಗೊಂದಲಕ್ಕೆ ತೆರೆ ಎಳೆದ್ರು.

ನಾಳೆ ಅಧಿಕೃತವಾಗಿ ಖಾತೆ ಜವಾಬ್ದಾರಿನ ಜಿಡಿಟಿ ವಹಿಸಿಕೊಳ್ತಾರೆ ಅಂತಾ ಸಿಎಂ ಕಚೇರಿ ಅಧಿಕೃತ ಪ್ರಕಟಣೆ ಹೊರಡಿಸಿದೆ.ಹಾಗಾಗಿ ಉನ್ನತ ಶಿಕ್ಷಣ ಸಚಿವ ಜಿಟಿಡಿ ಅವರೇ ಆಗಿ ಮುಂದುವರೀತಾರೆ.

- Call for authors -

LEAVE A REPLY

Please enter your comment!
Please enter your name here