ಖಗ್ರಾಸ ಚಂದ್ರಗ್ರಹಣ: ತಿಮ್ಮಪ್ಪನ ಮೊರೆ ಹೋದ ಗೌಡರ ಕುಟುಂಬ

0
141

ತಿರುಪತಿ:ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇರುವ ಹಾಗೂ

ದೈವಭಕ್ತ ಕುಟುಂಬವಾಗಿ‌ರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟಂಬ ಖಗ್ರಾಸ ಚಂದ್ರಗ್ರಹಣದ ದುಷ್ಪರಿಣಾಮ ಬೀರದಿರಲು ತಿಮ್ಮಪ್ಪನ ಮೊರೆ ಹೋಗಿದೆ.

ನಿನ್ನೆ ರಾತ್ರಿಯೇ ತಿರುಪತಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಯಾಣ ಬೆಳೆಸಿದ್ದರು. ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ತಾಯಿ ಚನ್ನಮ್ಮ,ಸಹೋದರ ಎಚ್.ಡಿ ರೇವಣ್ಣ ಜೊತೆ ತಿಮ್ಮಪ್ಪನ ಸನ್ನಿಧಾನಕ್ಕೆ‌ ಭೇಟಿ ನೀಡಿದ್ರು.ತಿರುಪತಿ ಬೆಟ್ಟದಲ್ಲಿ ನೆಲೆಸಿರುವ ತಿಮ್ಮಪ್ಪನ‌ ದರ್ಶನವನ್ನು ಮುಂಜಾನೆಯೇ ಮುಗಿಸಿದ‌ ಗೌಡ್ರ ಫ್ಯಾಮಿಲಿ ನಂತ್ರ ಸುಪ್ರಭಾತ ಪೂಜೆಯಲ್ಲಿ ಪಾಲ್ಗೊಂಡಿತು.ಪದ್ಮಾವತಿ ಅಮ್ಮನವರಿಗೂ ವಿಶೇಷ ಪೂಜೆ ಸಲ್ಲಿಕೆ ಮಾಡಿ ಬೆಂಗಳೂರಿಗೆ‌ ಹಿಂದಿರುಗಿತು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ನಂಬಿಕೆ ಹೊಂದಿರುವ ಗೌಡರ ಕುಟುಂಬ ಸಮಯ,ಕಾಲ,ನಕ್ಷತ್ರಗಳನ್ನು ನೋಡಿಕೊಂಡೇ ಮುನ್ನಡೆಯುತ್ತಾರೆ.ಅದರಂತೆ ಇಂದಿನ ಖಗ್ರಾಸ ಚಂದ್ರಗ್ರಹಣ ಕೆಟ್ಟ ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕೆ ಇಡೀ ಕುಟುಂಬ ಗ್ರಹಣಕ್ಕೂ ಮುನ್ನವೇ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದೆ.

- Call for authors -

LEAVE A REPLY

Please enter your comment!
Please enter your name here