ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೇಳಿದ್ದಾರೆ,ವಿವಾದ ಸಾಕು: ಜಯಮಾಲಾ

0
36

ಬೆಂಗಳೂರು: ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನನ್ನನ್ನು ಅಕ್ಕಾ ಎಂದು ಕರೆದಿದ್ದಾರೆ.ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವಳು.ಹಾಗಾಗಿ ಅವರು ಬಾಯಿತಪ್ಪಿ ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ.ಕ್ಷಮೆ ಕೇಳಿದ ಮೇಲೂ ಆ ವಿವಾದವನ್ನು ಮುಂದುವರಿಸುವುದು ಸರಿಯಲ್ಲ ಎಂದು ವಿವಾದಕ್ಕೆ ಸಚಿವೆ ಜಯಮಾಲಾ ತೆರೆ ಎಳೆದಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಪಕ್ಷದಲ್ಲೂ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ.ಹೆಣ್ಣುಮಕ್ಕಳು ಆಸೆ ಪಡೋದು ಸಹಜ.ಹಾಗಾಗಿ ಸಚಿವ ಸ್ಥಾನಕ್ಕೆ ಅವರೂ ಆಸೆಪಟ್ಟಿದ್ದಾರೆ.ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಹೆಚ್ಚಿನ ಹೆಣ್ಣುಮಕ್ಕಳಿಗೆ ಹೆಚ್ಚಿನ ಸಚಿವ ಸ್ಥಾನ ಸಿಗಲಿ.ರೂಪಾ ಶಶಿಧರ್ ಕೂಡ ಸಚಿವೆ ಆಗಲಿ ಎಂದು ಹಾರೈಸುತ್ತೇನೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆದಿದ್ದೇನೆ.ಬಜೆಟ್ ಬರುತ್ತಿರುವುದರಿಂದ ಇಲಾಖೆಯ ಯೋಜನೆಗಳ ಬಗ್ಗೆ ಚರ್ಚೆ ಆಗಿದೆ.ಯಾವುದನ್ನ ಸೇರಿಸಬೇಕು.ಯಾವುದನ್ನು ಬಿಡಬೇಕು ಅಂತ ಚರ್ಚೆ ಮಾಡಿದ್ದೇವೆ.ಎರಡು ಪಕ್ಷಗಳ ಪ್ರಣಾಳಿಕೆ ನಮ್ಮ ಮುಂದೆ ಇದೆ.ಹೀಗಾಗಿ ಹಲವು ಯೋಜನೆಗಳನ್ನು ಅಳವಡಿಸಬೇಕಿದೆ,ಸಿಎಂ ಮತ್ತು ಡಿಸಿಎಂ ಜೊತೆ ಹೊಸ ಯೋಜನೆಗಳ ಕುರಿತು ಚರ್ಚೆ ನಡೆಸ್ತೇನೆ ಎಂದರು.

ಹೆಚ್ ಐವಿ ಸೋಂಕಿತ ಮಕ್ಕಳ ಮನೆ ಖಾಲಿ ಮಾಡುವಂತೆ ಅಕ್ಕಪಕ್ಕದವರ ಒತ್ತಾಯ ಕುರಿತು ಪ್ರತಿಕ್ರಿಯೆ ನೀಡಿದ
ಸಚಿವೆ ಜಯಮಾಲಾ,ಬೆಳಗಾವಿ ಮಹೇಶ್ ಫೌಂಡೇಶನ್ ನಡೆಸುತ್ತಿರುವ ಸಂಸ್ಥೆ ಆ ಸಂಸ್ಥೆಗೂ ಇಲಾಖೆಗೂ ಸಂಬಂಧವಿಲ್ಲ ಆದರೆ ಮಕ್ಕಳು ಇರುವ ಜಾಗ ಬದಲಾಯಿಸಲು ಒತ್ತಡವಿದೆ ಗೊತ್ತಿಲ್ಲದೆ ಆ ಮಕ್ಕಳಿಗೆ ಇಂತ ಸೋಂಕು ಅಂಟಿಕೊಂಡಿದೆ ಮಕ್ಕಳನ್ನ ಮುಟ್ಟಿದರೆ ಸೋಂಕು‌ ಹರಡುತ್ತೆ ಅನ್ನುವುದು ಸರಿಯಲ್ಲ ಆ ಮಕ್ಕಳನ್ನ ಉತ್ತಮ ದೃಷ್ಠಿಯಿಂದ ನೋಡಬೇಕು. ಸಾರ್ವಜನಿಕರು ನಿವೇಶನ ಬದಲಾಯಿಸಿ ಅನ್ನುವುದು ಬೇಡ ಎಂದು ಸಾರ್ವಜನಿಕರಿಗೆ ಸಚಿವೆ ಜಯಮಾಲಾ ಮನವಿ ಮಾಡಿದರು.

- Call for authors -

LEAVE A REPLY

Please enter your comment!
Please enter your name here