ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಅಧಿಕಾರದ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಇಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
3 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನವನ್ನು ವಿತರಕರ ವಲಯಕ್ಕೆ ಮೀಸಲಿಡಲಾಗಿದ್ದು, ವಿತರಕರ ವಲಯದಲ್ಲಿ ಚಿನ್ನೆಗೌಡ್ರು ಮತ್ತು ಮಾರ್ಸ್ ಸುರೇಶ್ ನಡುವೆ ಪೈಪೊಟಿ ಪೈಪೋಟಿ ಇದೆ.
ಉಪಾಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಜಿ.ಕೆ. ಕುಟ್ಟಿ, ಕುಪ್ಪುಸ್ವಾಮಿ, ಬಿ.ಆರ್.ಕೇಶವ, ಬಿ.ಎಲ್.ಮಾಗರಾಜ್, ಕೆ.ಮಂಜು ಸ್ಪರ್ಧೆಯಲ್ಲಿದ್ದು, ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ
ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ , ವಿ.ಸುಬ್ರಮಣಿ ಸ್ಪರ್ಧಿಸುತ್ತಿದ್ದಾರೆ.
ವಿವಿಧ ವಲಯದಿಂದ ೧೫೦೦ ಮತದಾರರು ಮತ ಚಲಾಯಿಸಲಿದ್ದಾರೆ.










That is true. Let him speek Kannada only..