ಕೆಎಸ್ಆರ್‌ಟಿಸಿ ಗೆ ಸ್ಟೇಟ್ ಆಫ್ ಗವರ್ನೆನ್ಸ್-ಆರ್ಡರ್ ಆಫ್ ಮೆರಿಟ್ ಅವಾರ್ಡ್

0
106

ಬೆಂಗಳೂರು:ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕೆಎಸ್ಆರ್‌ಟಿಸಿಗೆ ಇದೀಗ ಪ್ರತಿಷ್ಠಿತ ರಾಷ್ಟ್ರೀಯ ಸ್ಟೇಟ್ ಆಫ್ ಗವರ್ನೆನ್ಸ್-ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ. ಸಂಸ್ಥೆ ಅಳವಡಿಸಿಕೊಂಡಿರುವ ಉಪಕ್ರಮಗಳಿಗೆ ನಾಲ್ಕು ಪ್ರಶಸ್ತಿ ಬಂದಿದೆ.

ನವದೆಹಲಿಯ ಕಾನ್ಸ್ಟಿಟ್ಯೂಷನಲ್ ಕ್ಲಬ್ ರಲ್ಲಿ ನಡೆದ 52 ನೇ ರಾಷ್ಟ್ರೀಯ ಶೃಂಗಸಭೆಯಲ್ಲಿ ಕೆಎಸ್ಆರ್‌ಟಿಸಿ ಗೆ ನಾಲ್ಕು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಸ್ಥಳದಲ್ಲಿ ಅನುಷ್ಠಾನಗೊಳಿಸಿರುವ ಆರೋಗ್ಯಕರ ಉಪಕ್ರಮಗಳು, ಅವತಾರ್ ಸೇವೆ,ಸಾರಿಗೆ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಅನುಷ್ಠಾನ ಮತ್ತು ವಹಿಕಲ್ ಟ್ರ್ಯಾಕಿಂಗ್ ಅಂಡ್ ಮಾನಿಟರಿಂಗ್ ಸಿಸ್ಟಮ್ ಗೆ ಪ್ರಶಸ್ತಿ ಬಂದಿದೆ.

ಸದರಿ ಪ್ರಶಸ್ತಿ ಸಮಾರಂಭವು ಸಾರ್ವಜನಿಕ ಆಡಳಿತದಲ್ಲಿನ ಉತ್ತಮ ಪ್ರಯತ್ನಗಳನ್ನು ಗುರುತಿಸುವ ಮತ್ತು
ಪರಿಣಾಮಕಾರಿಯಾಗಿ ಆಡಳಿತದ ಮಾದರಿ ಯೋಜನೆಗಳನ್ನು ಪುರಸ್ಕರಿಸುವ ವೇದಿಕೆಯಾಗಿದೆ. ಉತ್ತುಮ
ಆಡಳಿತವನ್ನು ನೀಡುವ ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕರ್ತವ್ಯ ನಿರ್ವಹಿಸುವ
ಸಂಸ್ಥೆಗಳು, ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುವ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯ ಕ್ಷೇತ್ರಗಳಾದ
ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ/ಪಂಚಾಯತ್‍ರಾಜ್, ನಗರಾಭಿವೃದ್ದಿ, ಸಾರಿಗೆ, ಹಣಕಾಸು ಮತ್ತು
ಭದ್ರತೆ ಕಾರ್ಯಕ್ಷೇತ್ರವನ್ನು ಒಳಗೊಂಡಿದ್ದು ಕೆಎಸ್ಆರ್‌ಟಿಸಿ ಅಳವಡಿಸಿಕೊಂಡ ಪರಿಣಾಮಕಾರಿ ಕ್ರಮಗಳಿಗೆ ಈ ಪ್ರಶಸ್ತಿಗಳು ಬಂದಿವೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

- Call for authors -

LEAVE A REPLY

Please enter your comment!
Please enter your name here