ಬೆಂಗಳೂರು: ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಜ್ವರ ಹಾಗೂ ಹೈ ಬಿಪಿ ಸಮಸ್ಯೆಯಿಂದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗಾಗಿ ಹಣಕಾಸಿನ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
ಖ್ಯಾತ ನಟಿ ವಿಜಯಲಕ್ಷ್ಮೀ ಕುಟುಂಬ ಹಣಕಾಸಿನ ಸಮಸ್ಯೆಯಲ್ಲಿದ್ದು ಹಣಕಾಸಿನ ನಿರೀಕ್ಷೆಯಲ್ಲಿದ್ದಾರೆ. ವಿಜಯಲಕ್ಷ್ಮೀ ಚಿಕಿತ್ಸಾ ವೆಚ್ಚ ಅಂದಾಜು ಒಂದು ಲಕ್ಷ ಆಗಲಿದ್ದು ನಮಗೆ ಧನಸಹಾಯ ಮಾಡಿ, ಅದನ್ನ ದುಡಿದು ತೀರಿಸುತ್ತೇವೆ ಎಂದು ವಿಜಯಲಕ್ಷ್ಮೀ ಅಕ್ಕ ಮನವಿ ಮಾಡಿದ್ದಾರೆ.
ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿದ್ದ ವಿಜಯಲಕ್ಷ್ಮೀಗೆ ಸಿನಿಮಾ ರಂಗದ ಕಡೆಯಿಂದ ಸಹಾಯ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ವಿಜಯಲಕ್ಷ್ಮೀ ಕುಟುಂಬ ಇದೆ.









