ಕುಮಾರಸ್ವಾಮಿ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಹುಷಾರ್: ಕೇಂದ್ರಕ್ಕೆ ನಂಜಾವಧೂತ ಶ್ರೀಗಳ ಎಚ್ಚರಿಕೆ

0
1504

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಏನಾದರೂ ತೊಂದರೆಕೊಟ್ಟರೆ ಸುಮ್ಮನಿರಲ್ಲ ಸರ್ಕಾರದ ಮೇಲೆ ಗದಾಪ್ರಹಾರ ಮಾಡಿದರೆ ಸಮುದಾಯ ತಿರುಗಿಬೀಳಲಿದೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಲ ತೋರಿಸಬೇಕಾಗುತ್ತದೆ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಹುಷಾರ್ ಎಂದು ಪ್ರಧಾನಿ ಮತ್ತು ಬಿಜೆಪಿ ನಾಯಕರಿಗೆ ನಂಜಾವಧೂತ ಶ್ರೀ ಎಚ್ಚರಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ನಂಜಾವಧೂತ ಶ್ರೀಗಳು,ಕುಮಾರಸ್ವಾಮಿ ಐದು ವರ್ಷ ಆಡಳಿತ ನಡೆಸುತ್ತಾರೆ ಅವರು ಐದು ವರ್ಷ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಚಿವ ಡಿಕೆ ಶುವಕುಮಾರ್ ಅವರದ್ದು, ನಮ್ಮ ಇಡೀ ಸಮುದಾಯ ಡಿಕೆಶಿಗೆ ಬಲನೀಡಬೇಕಿದೆ ಎರಡು ಮಹಾನ್ ದೃವಗಳು ಒಟ್ಟಾಗಿವೆ,ದೃವಗಳ ಕ್ರೋಡೀಕರಣದ ಫಲವಾಗಿ ಹೆಚ್ ಡಿಕೆ ಸಿಎಂ ಆಗಿದ್ದಾರೆ ಹೆಚ್ ಡಿಕೆ ಸಿಎಂ ಆಗಲು ಕಾರಣ ಡಿ.ಕೆ.ಶಿವಕುಮಾರ್,ಹಾಗಾಗಿ ಹೆಚ್ಡಿಕೆ ಸರ್ಕಾರ ಉರುಳಿಸದಂತೆ ಡಿಕೆಶಿಗೆ ಎಚ್ಚರಿಸಿದರು.

ನಮ್ಮ ಮೆಟ್ರೋಗೆ ಕೆಂಪೇಗೌಡರ ಹೆಸರಿಡಬೇಕು, ಅಹ್ಮದಾಬಾದ್ ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಮಿಸುತ್ತಿದ್ದಾರೆ
ಅದೇ ರೀತಿ ಕೆಂಪೇಗೌಡರ ಟವರ್ ಬೆಂಗಳೂರಿನಲ್ಲಾಗಬೇಕು
ಇದು ನಮ್ಮ ಸಮುದಾಯದ ಬೇಡಿಕೆ ಎಂದು ಸಿಎಂ ಕುಮಾರಸ್ವಾಮಿಗೆ ನಂಜಾವಧೂತ ಶ್ರೀಗಳು ಮನವಿ ಮಾಡಿದರು.

ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಮ್ಮ ಸಮುದಾಯದ ಹಲವು ಬೇಡಿಕೆ ಇಟ್ಟಿದ್ದಾರೆ ಆ ಬೇಡಿಕೆಗೆ ನನ್ನ ಧ್ವನಿಯೂ ಸೇರಲಿದೆ ಸ್ಕಿಲ್ ಡೆವಲಪ್ ಮೆಂಟ್ ವಿವಿಯನ್ನ ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ ಉದ್ಯೋಗ ಸಮಸ್ಯೆಗೆ ಪರಿಹಾರ ಇಲ್ಲಿ ಸಿಗಲಿದೆ ಬೆಂಗಳೂರಿನಿಂದಲೇ ಶೇ.65 ಆದಾಯ ಬರುತ್ತಿದೆ
ಆ ಆದಾಯವನ್ನ ಉತ್ತರ ಕರ್ನಾಟಕದ ನೀರಾವರಿಗೆ ನೀಡುತ್ತೇವೆ ಎಂದರು.

ಇನ್ನೂ ಸರ್ಕಾರ ರಚನೆಯಾಗಿ ತಿಂಗಳಾಗಿಲ್ಲ ಆಗಲೇ ಉತ್ತರ ಕರ್ನಾಟಕ ನಿರ್ಲಕ್ಷ್ಯ ಅಂತ ವರದಿ ಮಾಡುತ್ತಿದ್ದಾರೆ
ಇದು ಸರಿಯಲ್ಲ ನಾವು ಪ್ರಾದೇಶಿಕವಾರು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಇಡೀ ರಾಜ್ಯದ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದೇವೆ ರಾಜ್ಯವನ್ನ ಉತ್ತರ,ದಕ್ಷಿಣ ಅಂತ ಹಂಚುವುದು ಬೇಕಿಲ್ಲ ಎಂದು ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಹರಿಹಾಯ್ದರು.

ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ ಮಳೆಯಾದರೆ ನನಗೂ,ಡಿಕೆಶಿಗೂ ಸ್ವಲ್ಪ ನೆಮ್ಮದಿ ಇಲ್ಲಾಂದ್ರೆ ತಮಿಳುನಾಡಿನವರು ಮತ್ತೆ ಕ್ಯಾತೆ ತೆಗೆಯುತ್ತಾರೆ ಎಂದು ಸಿಎಂ‌ ಹಾಸ್ಯ ಚಟಾಕಿ ಹಾರಿಸಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ ಮೂರು ವರ್ಷ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ ಇದನ್ನ ಗಮನದಲ್ಲಿಟ್ಟುಕೊಂಡು ಮುಂದುವರಿದಿದ್ದೇನೆ ಇದರಿಂದ ಸಮ್ಮಿಶ್ರ ಸರ್ಕಾರಕ್ಕೇನು ತೊಂದರೆಯಿಲ್ಲ ಅಭಿವೃದ್ಧಿ ಪೂರಕ ಕೆಲಸಗಳಿಗೆ ನಮ್ಮ ಒತ್ತಿದೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರು ಕಟ್ಟಿದವರು ಕೆಂಪೇಗೌಡರು ಅವರ ಜಯಂತಿ ಆಚರಣೆಗೆ ಮನವಿ ಮಾಡಿದ್ದೆವು ಆಗ ಸಿದ್ದರಾಮಯ್ಯ ಜಯಂತಿ ಆಚರಣೆಗೆ ಒಪ್ಪಿಕೊಂಡಿದ್ದರು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ ಹಿಂದೆ ಕೆಂಪೇಗೌಡರ ಜನ್ಮದಿನದ ಗೊಂದಲವಿತ್ತು ತಜ್ಞರ ಅಭಿಪ್ರಾಯದ ಹಿನ್ನೆಲೆ ಜೂನ್ 22ರಂದು ರಂದು ಆಚರಿಸುತ್ತಿದ್ದೇವೆ ಎಂದರು.

ಇದು ಯಾವ ಪಕ್ಷದ ಜಯಂತಿ ಹಬ್ಬವೂ ಅಲ್ಲ ಇದು ಸಮಸ್ತ ನಾಗರೀಕರ ಹಬ್ಬದ ಆಚರಣೆ ಬೆಂಗಳೂರಿಗೆ ಮಾತ್ರ ಇದು ಸೀಮಿತವಾಗಿಲ್ಲ ಈ ಜಯಂತಿ ಆಚರಣೆ ಎಲ್ಲ ತಾಲೂಕು ಕೇಂದ್ರಗಳಲ್ಲು ನಡೆಯಲಿದೆ ಕೆಂಪೇಗೌಡರು ಎಲ್ಲ ವರ್ಗದವರಿಗೆ ಅವಕಾಶ ಕೊಟ್ಟಿದ್ದರು ಬೆಂಗಳೂರು ಇಲ್ಲಿನ ನಾಗರಿಕರ ಆಸ್ತಿಯಲ್ಲ,ಕರ್ನಾಟಕದ ಆಸ್ತಿ.ಬೆಂಗಳೂರು ವಿವಿಗೆ ಕೆಂಪೇಗೌಡರ ಹೆಸರಿಡಬೇಕು ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಪಾಠ ಅಳವಡಿಸಬೇಕು ಕೆಂಪೇಗೌಡರ ಭವ್ಯ ಕಟ್ಟಡ ನಿರ್ಮಿಸಬೇಕಿದೆ ಕೆಂಪೇಗೌಡರ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದ ಸಿಎಂ ಹೆಚ್ಡಿಕೆಗೆ ಡಿಕೆಶಿ ಮನವಿ ಮಾಡಿದರು.

- Call for authors -

LEAVE A REPLY

Please enter your comment!
Please enter your name here