ಹೆಲಿಕ್ಯಾಪ್ಟರ್ ದುಂದು ವೆಚ್ಚ ಸಿಎಂ ಹೇಳಿಕೆಗೆ: ಬಿಎಸ್ವೈ ಗರಂ

ಬೆಂಗಳೂರು: ಉಸ್ತುವಾರಿ ಮುಖ್ಯಮಂತ್ರಿ ಆಗಿದ್ದ ವೇಳೆ ಬಿ.ಎಸ್ ಯಡಿಯೂರಪ್ಪ ಹೆಲಿಕ್ಯಾಪ್ಟರ್ ಬಳಸಿ ದುಂದು ವೆಚ್ಚ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೀಡಿದ‌ ಹೇಳಿಕೆಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಈಗಲೂ ನಾನು ಪ್ರಯಾಣದ ವೆಚ್ಚ ಭರಿಸಲು ಸಿದ್ದ‌ನಿದ್ದೇನೆ ಎಂದು ಮುಖ್ಯಮಂತ್ರಿಗಳಿಗೆ ಖಾರವಾಗಿ ಪತ್ರ ಬರೆದಿದ್ದಾರೆ.

ಮೇ 2ರಂದು ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಡಾ.ಮಹಾಂತ ಶಿವಯೋಗಿಗಳು ಲಿಂಗೈಕ್ಯರಾಗಿದ್ದ ಸಮಯದಲ್ಲಿ ಉಸ್ತುವಾರಿ ಸಿಎಂ ಆಗಿ ನನ್ನ ಕರ್ತವ್ಯವೆಂದು ತಿಳಿದು ಅಲ್ಲಿಗೆ ಹೋಗಿ ಗೌರವ ಸಲ್ಲಿಸಿದ್ದೆ, ನಂತರ ದಾವಣಗೆರೆ ಜಿಲ್ಲೆ‌ ಚನ್ನಗಿರಿ ತಾಲ್ಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ನನಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದ್ದರು. ನನ್ನ ಪ್ರಮುಖ ವಾಸದ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ನೀಡಿದ್ದೆ, ಆದರೆ ಭಾಷಣದಲ್ಲಿ ಹಗರವಾಗಿ ಮಾತನಾಡಿರುವುದು ಅತ್ಯಂತ ನೋವು ತಂದಿದೆ ಎಂದು ಪತ್ರದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಭದ ಸೂಕ್ಷ್ಮತೆಯನ್ನು ಅರಿಯದೆ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದಿತ್ತು. ನಾನು ಈಗಲೂ ನನ್ನ ಪ್ರವಾಸದ ಪ್ರಯಾಣದ ವೆಚ್ಚವನ್ನು ಭರಿಸಲು ಸಿದ್ದನಿದ್ದೇನೆ, ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಜನರ ದಾರಿತಪ್ಪಿಸುವಂತಹ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ, ವೈಯಕ್ತಿಕವಾಗಿ ತಮಗೆ ಸ್ವಾಮೀಜಿಗಳ ಬಗ್ಗೆ ಗೌರವ ಇಲ್ಲದಿರಬಹುದು, ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿಗೆರೆ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದಿರಿ, ಈಗ ಸ್ವಾಮೀಜಿಯೊಬ್ಬರು ಲಿಂಗೈಕ್ಯರಾದ ವೇಳೆ ಗೌರವ ಸಲ್ಲಿಕೆ ಮಾಡಿದ್ದನ್ನು ದುಂದುವೆಚ್ಚ ಎಂದು ಅಹಂಕಾರದಿಂದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಕಾಲಾ ಚಿತ್ರ ಬಿಡುಗಡೆಗೆ ವಿರೋಧ: ಸಿಲಿಕಾನ್ ಸಿಟಿಯಲ್ಲಿ ಪ್ರದರ್ಶನ ರದ್ದು

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆಗೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಚಿತ್ರಮಂದಿರಗಳ ಮುಂದೆ ಸಂಘಟನೆಗಳ ಪ್ರತಿಭಟನೆಯಿಂದ ಪ್ರದರ್ಶನ ಆರಂಭಗೊಂಡಿಲ್ಲ.

ಕಾಲ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಸಮ್ಮತಿ ನೀಡಿ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಚಿತ್ರಮಂದಿರಗಳಿಗೆ ಭದ್ರತೆ ಒದಗಿಸಿದ್ದಾರೆ. ಆದರೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಗಳ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆ.ಜಿ ರಸ್ತೆಯ ಭೂಮಿಕ, ಲಾಲ್ ಬಾಗ್ ರಸ್ತೆಯ ಊರ್ವಶಿ ಸೇರಿದಂತೆ ಕಾಲಾ ಚಿತ್ರ ಬಿಡುಗಡೆಯಾಗಬೇಕಿದ್ದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಇನ್ನೂ ಆರಂಭಗೊಂಡಿಲ್ಲ. ಕಾಲಾ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎನ್ನುವ ಫಲಕಗಳನ್ನು ಹಾಕಲಾಗಿದೆ. ಪೊಲೀಸ್ ಭದ್ರತೆ ಇದ್ದರೂ ಟಿಕೆಟ್ ನೀಡಲು ಹಿಂದೇಟು ಹಾಕಿದ ಚಿತ್ರಮಂದಿರಗಳ ವ್ಯವಸ್ಥಾಪಕರು ಚಿತ್ರ ಪ್ರದರ್ಶನ ಮಾಡುವುದರಿಂದ ದೂರ ಉಳಿದಿದ್ದಾರೆ.

ಇನ್ನು ಮಾಲ್ ಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುತ್ತದೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಮಂತ್ರಿ ಮಾಲ್ ಮುಂದೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಲಿಡೋ ಮಾಲ್ ನಲ್ಲಿ, ಆರ್ ಆರ್ ನಗರದ ಗೋಪಾಲನ್ ಮಾಲ್ ನಲ್ಲಿ ಕಾಲಾ ಚಿತ್ರದ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಆದರೆ ಮಂತ್ರಿ ಮಾಲ್ ನಲ್ಲಿ ಮಾತ್ರ ಆನ್ ಲೈನ್ ಬುಕಿಂಗ್ ನಿಲ್ಲಿಸಿ‌ ಥಿಯೇಟರ್ ಒಳಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಮಾಲ್ ಒಳಗೆ ನುಗ್ಗಲು‌ ಯತ್ನಿಸಿದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ಬಂಧಿಸಿ ಕರೆದೊಯ್ದರು.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ,ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಲಾ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ,ಕೋರ್ಟ್ ಆದೇಶದಂತೆ ಪೊಲೀಸರು ಚಿತ್ರಮಂದಿರಗಳಿಗೆ ಭದ್ರತೆ ಕಲ್ಪಿಸಿದ್ದಾರೆ,ಅವರ ಕೆಲಸ ಅವರು ಮಾಡಲಿ, ನಾವು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲ್ಲ,ಆದರೆ ನಮ್ಮ ಹೋರಾಟ ಮುಂದುವರೆಸುತ್ತೇವೆ,ಚಿತ್ರದ ಪ್ರದರ್ಶನ ಆರಂಭಗೊಂಡರೆ ಗಂಟೆ ಗಂಟೆಗೂ ಪ್ರತಿಭಟ‌ನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಮಗೆ ರಾಜಕೀಯ ಬೇಕಿಲ್ಲ, ರಜನಿಕಾಂತ್ ಕರ್ನಾಟಕ್ಕೆ ಬಂದು ಮಾತನಾಡಲಿ, ಅವರ ರಾಜ್ಯದ ಸಿಎಂ ನಮ್ಮ ರಾಜ್ಯಕ್ಕೆ ಬಂದು ನಮ್ಮ ರಾಜ್ಯದ ಸಿಎಂ ಜೊತೆ ಮಾತನಾಡಲಿ, ಮಾತುಕತೆ ಮೂಲಕ‌ ಸಮಸ್ಯೆ‌ ಪರಿಹರಿಸಿಕೊಳ್ಳಬೇಕು, ಕನ್ನಡಿಗರು, ತಮಿಳರು ಭಾರತಾಂಬೆಯ ಮಕ್ಕಳು, ನಮ್ಮನ್ನು ಕಚ್ಚಾಡುವಂತೆ ಮಾಡಬೇಡಿ, ಮಾತುಕತೆ ಮೂಲಕ‌ ಸಮಸ್ಯೆ‌ಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕಾಲಾ ಚಿತ್ರ ಬಿಡುಗಡೆಗೆ ವಿರೋಧ: ಸಿಲಿಕಾನ್ ಸಿಟಿಯಲ್ಲಿ ಪ್ರದರ್ಶನ ರದ್ದು

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆಗೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಚಿತ್ರಮಂದಿರಗಳ ಮುಂದೆ ಸಂಘಟನೆಗಳ ಪ್ರತಿಭಟನೆಯಿಂದ ಪ್ರದರ್ಶನ ಆರಂಭಗೊಂಡಿಲ್ಲ.

ಕಾಲ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಸಮ್ಮತಿ ನೀಡಿ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಚಿತ್ರಮಂದಿರಗಳಿಗೆ ಭದ್ರತೆ ಒದಗಿಸಿದ್ದಾರೆ. ಆದರೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಗಳ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆ.ಜಿ ರಸ್ತೆಯ ಭೂಮಿಕ, ಲಾಲ್ ಬಾಗ್ ರಸ್ತೆಯ ಊರ್ವಶಿ ಸೇರಿದಂತೆ ಕಾಲಾ ಚಿತ್ರ ಬಿಡುಗಡೆಯಾಗಬೇಕಿದ್ದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಇನ್ನೂ ಆರಂಭಗೊಂಡಿಲ್ಲ. ಕಾಲಾ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎನ್ನುವ ಫಲಕಗಳನ್ನು ಹಾಕಲಾಗಿದೆ. ಪೊಲೀಸ್ ಭದ್ರತೆ ಇದ್ದರೂ ಟಿಕೆಟ್ ನೀಡಲು ಹಿಂದೇಟು ಹಾಕಿದ ಚಿತ್ರಮಂದಿರಗಳ ವ್ಯವಸ್ಥಾಪಕರು ಚಿತ್ರ ಪ್ರದರ್ಶನ ಮಾಡುವುದರಿಂದ ದೂರ ಉಳಿದಿದ್ದಾರೆ.

ಇನ್ನು ಮಾಲ್ ಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುತ್ತದೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಮಂತ್ರಿ ಮಾಲ್ ಮುಂದೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಲಿಡೋ ಮಾಲ್ ನಲ್ಲಿ, ಆರ್ ಆರ್ ನಗರದ ಗೋಪಾಲನ್ ಮಾಲ್ ನಲ್ಲಿ ಕಾಲಾ ಚಿತ್ರದ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಆದರೆ ಮಂತ್ರಿ ಮಾಲ್ ನಲ್ಲಿ ಮಾತ್ರ ಆನ್ ಲೈನ್ ಬುಕಿಂಗ್ ನಿಲ್ಲಿಸಿ‌ ಥಿಯೇಟರ್ ಒಳಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಮಾಲ್ ಒಳಗೆ ನುಗ್ಗಲು‌ ಯತ್ನಿಸಿದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ಬಂಧಿಸಿ ಕರೆದೊಯ್ದರು.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ,ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಲಾ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ,ಕೋರ್ಟ್ ಆದೇಶದಂತೆ ಪೊಲೀಸರು ಚಿತ್ರಮಂದಿರಗಳಿಗೆ ಭದ್ರತೆ ಕಲ್ಪಿಸಿದ್ದಾರೆ,ಅವರ ಕೆಲಸ ಅವರು ಮಾಡಲಿ, ನಾವು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲ್ಲ,ಆದರೆ ನಮ್ಮ ಹೋರಾಟ ಮುಂದುವರೆಸುತ್ತೇವೆ,ಚಿತ್ರದ ಪ್ರದರ್ಶನ ಆರಂಭಗೊಂಡರೆ ಗಂಟೆ ಗಂಟೆಗೂ ಪ್ರತಿಭಟ‌ನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಮಗೆ ರಾಜಕೀಯ ಬೇಕಿಲ್ಲ, ರಜನಿಕಾಂತ್ ಕರ್ನಾಟಕ್ಕೆ ಬಂದು ಮಾತನಾಡಲಿ, ಅವರ ರಾಜ್ಯದ ಸಿಎಂ ನಮ್ಮ ರಾಜ್ಯಕ್ಕೆ ಬಂದು ನಮ್ಮ ರಾಜ್ಯದ ಸಿಎಂ ಜೊತೆ ಮಾತನಾಡಲಿ, ಮಾತುಕತೆ ಮೂಲಕ‌ ಸಮಸ್ಯೆ‌ ಪರಿಹರಿಸಿಕೊಳ್ಳಬೇಕು, ಕನ್ನಡಿಗರು, ತಮಿಳರು ಭಾರತಾಂಬೆಯ ಮಕ್ಕಳು, ನಮ್ಮನ್ನು ಕಚ್ಚಾಡುವಂತೆ ಮಾಡಬೇಡಿ, ಮಾತುಕತೆ ಮೂಲಕ‌ ಸಮಸ್ಯೆ‌ಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಬೈಕ್‌ಗೆ ಟ್ರಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹದೇವಪುರ ಬಳಿಯ ಹೂಡಿಯಲ್ಲಿ ನಡೆದಿದೆ.

ರಮೀಜ್ ಮೃತ ಬೈಕ್ ಸವಾರ. ಇಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತಿದ್ದ ವೇಳೆ ಟ್ರಕ್ ಚಾಲಕ ಅತಿಯಾದ ವೇಗದಿಂದ ಬಂದು ರಮೀಜ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರಕ್ ಚಕ್ರಕ್ಕೆ ಸಿಲುಕಿ ರಮೀಜ್ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ.

ವೈಟ್ ಫಿಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟ್ರಕ್ ಚಾಲಕನಿಗಾಗಿ ಹುಡುಕಾಟ ನಡೆಸಲಾಗಿದೆ.

ನಲಪಾಡ್ ಜಾಮೀನು ಅರ್ಜಿ ವಿಚಾರಣೆ: ಎಸ್ಪಿಪಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಉದ್ಯಮಿ ಪುತ್ರ ವಿದ್ಯತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮೊಹಮದ್ ನಲಪಾಡ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಕೆಳ ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರಗೊಂಡ ಬೆನ್ನಲ್ಲೇ ಜಾಮೀನು ಕೋರಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು.

ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ ವಿಶೇಷ ಸರ್ಕಾರಿ ಅಭಿಯೋಜಕತ ಮೂಲಕ ಪ್ರಕರಣದ ಪ್ರತಿವಾದಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜೂನ್ 11 ಕ್ಕೆ ಮುಂದೂಡಿತು.

ಜೆಡಿಎಸ್ ದೋಸ್ತಿಗೆ ಪರಂ ಬೇಸರ: ಆಡಿಯೋ ಬಹಿರಂಗ!

ಬೆಂಗಳೂರು: 37 ಸ್ಥಾನ ಗೆದ್ದಿರುವ ಜೆಡಿಎಸ್ ಪಕ್ಷದ ಮುಂದೆ ಮಂಡಿಯೂರುವ ಸ್ಥಿತಿ ನಮಗೆ ಬರಬಾರದಿತ್ತು. ಅನಿವಾರ್ಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ ಈ ಬಗ್ಗೆ ನಮಗೂ ನೋವಿದೆ. ಈ ರೀತಿ ಬೇಸರ ತೋಡಿಕೊಂಡಿದ್ದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.

ಜೂನ್ 2 ರಂದು ಸರ್ದಾರ್ ಪಟೇಲ್ ಭವನದಲ್ಲಿ ನಡೆದ ಕಾಂಗ್ರೆಸ್ ಆತ್ಮಾವಲೋಕನಾ ಸಭೆಯಲ್ಲಿ ಕಾರ್ಯಕರ್ತರ ಎದುರು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಅದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದರು.
ಆದ್ರೆ ಪರಮೇಶ್ವರ್ ಮಾತನಾಡಿದ್ದ ಆಡಿಯೋ ಇಂದು ಬಹಿರಂಗಗೊಂಡಿದೆ.

ಜೆಡಿಎಸ್ ಕಾಂಗ್ರೆಸ್ ದೋಸ್ತಿ ಬಗ್ಗೆ ಅತೃಪ್ತಿ ಹೊರಹಾಕಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನೀವೇ ಮುಖ್ಯಮಂತ್ರಿ ಪದವಿ ಇಟ್ಟುಕೊಳ್ಳಿ ಎಂದು 37 ಸ್ಥಾನ ಗೆದ್ದ ಪ್ರಾದೇಶಿಕ ಪಕ್ಷದ ಹಿಂದೆ ಓಡುವಂಥ ದಯನೀಯ ಸ್ಥಿತಿ ಕಾಂಗ್ರೆಸ್‌ಗೆ ಬರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ ಮೈತ್ರಿ ಸರ್ಕಾರದ ಬಗ್ಗೆ ಏನ್ ಹೇಳಿದ್ದಾರೆ ಎನ್ನುವ ಪೂರ್ಣ ಮಾಹಿತಿ ಇಲ್ಲಿದೆ.

ಆಡಿಯೋ: 01

ಪರಮೇಶ್ವರ್ – ನಾವೀಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ನಾನು ಪ್ರಾಮಾಣಿಕವಾಗಿ ಎರಡು ಮಾತುಗಳನ್ನು ಆಡುತ್ತೇನೆ.‌ಎಲ್ಲವೂ ಚೆನ್ನಾಗಿದೆ ಅಂತ ದಯಮಾಡಿ ತಿಳಿದುಕೊಳ್ಳಬೇಡಿ. ಒಂದು ರಾಷ್ಟ್ರೀಯ ಪಕ್ಷ , ಕೇವಲ 37 ಸ್ಥಾನಗಳನ್ನು ಗೆದ್ದಿರತ್ತಕ್ಕಂತ ಒಂದು ಪ್ರಾದೇಶಿಕ ಪಕ್ಷಕ್ಕೆ , ನೀವೇ ಮುಖ್ಯಮಂತ್ರಿ ಸ್ಥಾನ ತಗೋಳಿ ನೀವೇ ಸರ್ಕಾರ ಅಂತ ಹೇಳುವಾಗ ಮುಖ್ಯಮಂತ್ರಿ ಪದವಿ ಹಾಗೂ ಸಚಿವ ಸ್ಥಾನಗಳನ್ನು ಬೇರೆಯವರಿಗೆ ನೀಡುವಾಗ ಎಷ್ಟು ನೋವಾಗುತ್ತದೆ ಎಂಬುದನ್ನು ನಾನು ನಿಮಗೆ ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಬಹಳ ಜನ ನಿಮ್ಮಲ್ಲಿ ಹಲವು ಜನ ನನ್ನ ಹತ್ತಿರ ಬಂದು ಹೇಳಿದ್ರು. ಯಾಕ್ ಸ್ವಾಮಿ ಇಂತಹ ಕೆಲಸ ಮಾಡ್ತಿದ್ದೀರಿ ಅಂತ. ನಾವೇ ಮುಖ್ಯಮಂತ್ರಿಯಾಗಬಹುದಿತ್ತು. ನಾವೇ ಹೀಗ್ ಮಾಡಬಹುದಿತ್ತು. ನೀವ್ ಹೀಗ್ ಆಗಬಹುದಾಗಿತ್ತು. ನೀವ್ ಯಾಕ್ ಹೀಗ್ ಮಾಡಿದ್ರಿ ಅಂತ ಕೆಲವರು ಬಂದು ಹೇಳಿದ್ರು.ಆದರೆ ಯಾವ್ ರೀತಿ ಪರಿಸ್ಥಿತಿ, ರಾಜಕೀಯ ಪರಿಸ್ಥಿತಿ ಯೋಚನೆ ಮಾಡಿ.15 ತಾರೀಖು ನಾನು ಹೋರಾಟ ಮಾಡ್ತಾ ಇದ್ದೀನಿ ನನ್ನ ಕ್ಷೇತ್ರದಲ್ಲಿ. ನನ್ನದೇ ಕ್ಷೇತ್ರದಲ್ಲಿ 13 ನೇ ತಾರೀಖು ಹೋರಾಟ, ಹೊಡೆದಾಟ, ಊರಲ್ಲಿ ಕಿತ್ತಾಟ ,15 ನೇ ತಾರೀಖು ರಿಸಲ್ಟ್ ಬರುತ್ತೆ.ಯೋಚನೆ ಮಾಡಿ ಪರಿಸ್ಥಿತಿ ಹೇಗ್ ಇದೆ ಅನ್ನೋದನ್ನು ಯೋಚನೆ ಮಾಡಿ. ನಮ್ಮ ಬಳಿ ಈಗ ಹೆಚ್ಚು ಸಮಯ ಉಳಿದಿಲ್ಲ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಗೆದ್ದರೆ ಮಾತ್ರ, ಸರ್ಕಾರದಲ್ಲಿ ಕಾಂಗ್ರೆಸ್‌ನ ಧ್ವನಿ ಗಟ್ಟಿಯಾಗುತ್ತದೆ. ಪಕ್ಷದ ಪುನಶ್ಚೇತನ ಮಾಡುವ ಶಕ್ತಿಯೂ ಸಿಗುತ್ತದೆ. ಒಂದು ವೇಳೆ ಅಲ್ಲೂ ಫಲಿತಾಂಶ ಉಲ್ಟಾ ಆದರೆ, ನಾವು ಹೀಗೆಯೇ ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಹೋಗಬೇಕಾಗುತ್ತದೆ.

ಆಡಿಯೋ: 02

ಪರಮೇಶ್ವರ್ -ಮೊನ್ನೆ ಖಾತೆ ಹಂಚಿಕೆಯಲ್ಲು ಗೊಂದಲ ಆಯ್ತು.ಪ್ರಾಮಾಣಿಕವಾಗಿ ಚರ್ಚೆ ಮಾಡೋಣ.ಇಲ್ಲಿಯವರಿಗೆ ಮಾತನಾಡಿಕೊಂಡ್ರು ಅಂದ್ರೆ ಪರಮೇಶ್ವರ ಒಬ್ಬನೇ ಪ್ರಮಾಣ ವಚನ ಸ್ವೀಕರ ಮಾಡಿದ್ದಾನೆ ಅಂತ ಪಕ್ಷದ ಕೆಲವರು ನನ್ನ ವಿರುದ್ಧ ತೆರೆಮರೆಯಲ್ಲಿ ಮಾತನಾಡಿಕೊಂಡರು. ಆದರೆ,ತಪ್ಪು ನನ್ನದಲ್ಲ.ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಾನ್ ಬಂದಿದ್ದೇನೆ .ಮೇಡಮ್ ಬಂದಿದ್ದಾರೆ.ಈ ದೇಶದ ವಿವಿಧ ರಾಜ್ಯಗಳ ರಾಷ್ಟ್ರೀಯ ಪಕ್ಷಗಳ ಮುಖಂಡರು ಬಂದಿದ್ದಾರೆ. ಪ್ರಮಾಣ ವಚನವನ್ನು ಇಡೀ ದೇಶವೇ ನೋಡಿದೆ, ಪ್ರಪಂಚ ನೋಡಿದೆ, ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಒಬ್ಬರೇ ಒಬ್ಬರು ಇಲ್ಲದೇ ಹೋದ್ರೆ ಏನ್ ಆಗಬಹುದು ಅಂದ್ರು ರಾಹುಲ ಗಾಂಧಿ.ಅಧಿಕಾರಕ್ಕೆ ಬಂದ್ರು ಒಂದು ಖಾತೆ ಇಲ್ಲದೆ ಹೋದ್ರೆ ಹೇಗೆ ರಾಷ್ಟ್ರೀಯ ಪಕ್ಷದ ಘನತೆ ಏನಾಗುತ್ತಿತ್ತು ಯೋಚಿಸಿ.ಅದೊಂದೇ ಕಾರಣಕ್ಕೆ ನಾನು ಪ್ರಮಾಣ ವಚನ ತಗೊಂಡೆ.ಸುಲಭನಾಗಿದ್ದೇವೆ ಈ ಮೈತ್ರಿ ಸರ್ಕಾರ ಮಾಡ್ಕೊಂಡಿದಿವಿ, ನಮ್ ಸರ್ಕಾರವಿದೆ ,ಪರಮೇಶ್ವರ ಇದ್ದಾರೆ 20 ಜನ ಬರ್ತಾರೆ ಅಂತ ಅರಾಮಾಗಿರತ್ತೆ ಅಂತ ದಯವಿಟ್ಟು ತಿಳಿದುಕೊಳ್ಳಬೇಡಿ ಕಠಿಣದ ದಿವಸಗಳು ಇದ್ದಾವೆ. “ಟಫ್ ಟೈಮ್”. ಅದಕ್ಕೆ ನಿಮ್ಮನೆಲ್ಲಾ ವಿನಂತಿ ಮಾಡಿಕೊಳ್ಳುತ್ತೇನೆ. ನೀವೆಲ್ಲಾ ,ನೀವೆಲ್ಲಾ ಇನ್ನಷ್ಟು ಜಾಸ್ತಿ ಕೆಲಸ ಮಾಡಬೇಕು.

ಇದು ಪರಮೇಶ್ವರ್ ಆಡಿರುವ ಮಾತುಗಳು.
ಈವರೆಗೂ ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದ ಡಿಸಿಎಂ ಪರಮೇಶ್ವರ್ ಇದೀಗ ಆಡಿಯೋ ಬಹಿರಂಗವಾದ ನಂತರ ಯಾವ ಸಮಜಾಯಿಷಿ ನೀಡುತ್ತಾರೋ ಕಾದು ನೋಡಬೇಕು.