ಸದನದಲ್ಲಿ ಫಾರ್ವರ್ಡೆಡ್ ಮೆಸೇಜ್ ಓದಿ ಪೇಚಿಗ ಸಿಲುಕಿದ ಶರವಣ

0
40

ಫೈಲ್ ಫೋಟೋ:

ಬೆಂಗಳೂರು:ವಿಧಾನ ಪರಿಷತ್ ಕಲಾಪ ನಡೆಯುವ ವೇಳೆ ವಾಟ್ಸ್ ಆ್ಯಪ್ ಮೆಸೇಜ್ ಓದಿ ಜೆಡಿಎಸ್ ಸದಸ್ಯ ಶರವಣ್ ಪೇಚಿಗೆ ಸಿಲಿಕಿದರು.ಸ್ವಪಕ್ಷದ ಸದಸ್ಯರಿಂದಲೇ ಟೀಕೆಗೆ ಒಳಗಾದರು.

ವಿಧಾನ ಪರಿಷತ್ ಕಲಾಪದಲ್ಲಿ ಮೊಬೈಲ್‌ ಬಳಕೆ ನಿಷೇಧವಿದ್ದರೂ ಕೂಡ ಜೆಡಿಎಸ್ ಸದಸ್ಯ ಶರವಣ ಮೊಬೈಲ್ ವಾಟ್ಸ್ ಆಪ್ ನೋಡಿದರು.ಅದರಲ್ಲಿನ ಸಂದೇಶವನ್ನು ಓದಿ ಹೇಳಿದರು.ಮೂರನೇ ಕ್ಲಾಸ್ ಪಾಸ್ ಆದವರು ರಾಜಕೀಯಕ್ಕೆ ಬರ್ತಾರೆ ಎನ್ನುವ ಮೆಸೇಜ್ ಓದುತ್ತಿದ್ದಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸದಸ್ಯರು ಗರಂ ಆದರು.ಪಕ್ಷಾತೀತವಾಗಿ
ಶರವಣ್ ವಿರುದ್ಧ ಎಲ್ಲ ಸದಸ್ಯರು ಮುಗಿಬಿದ್ದರು.

ವಿದ್ಯಾರ್ಹತೆ ಇಲ್ಲದವರು ಯಾರು ರಾಜಕಾರಣಿಗಳಾಗಲ್ಲ ಎಂದು ಬಿಜೆಪಿಯ ತೇಜಸ್ವಿನಿಗೌಡ ತಿರುಗೇಟು ನೀಡಿದ್ರೆ
ಏನೋ ಬಂದಿದ್ದು ಓದಿದ್ರೆ ಹೇಗೆ ಎಂದ ಸಚಿವ ಬಂಡೆಪ್ಪ ಕಾಶೆಂಪುರ ಅಸಮಧಾನ ಹೊರಹಾಕಿದ್ರು.
ನಾನು ಪದವಿ ಮುಗಿಸಿದ್ದೇನಪಾ ನನಗೂ ನೋವಾಗುತ್ತೆ ಎಂದ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ, ನೀ ಏನ್ ಓದಿದಿಯೋ ಗೊತ್ತಿಲ್ಲ ಎಂದು ಶರವಣ್ ಗೆ ತಿರುಗೇಟು ನೀಡಿದ್ರು.ಮೇಲ್ಮನೆಯ ವೈಭವ ಎತ್ತಿಹಿಡಿಬೇಕು ಎಂದು ಶರವಣ್ ಗೆ ಜೆಡಿಎಸ್ ನ ಬೋಜೇಗೌಡ ತಿವಿದರೆ ವಾಟ್ಸ್ ಆ್ಯಪ್ ನೋಡೋದನ್ನೇ ಬಿಟ್ಟುಬಿಡು ಎಂದು ಹೊರಟ್ಟಿ ಸಲಹೆ ನೀಡಿದ್ರು.

- Call for authors -

LEAVE A REPLY

Please enter your comment!
Please enter your name here