ತಹಸೀಲ್ದಾರ್ ಚಂದ್ರಮೌಳೇಶ್ವರ ಕೊಲೆ ಹಿನ್ನೆಲೆ: ಕೋಲಾರ ಸರ್ಕಾರಿ ಅಧಿಕಾರಿಗಳಿಗೆ ಗನ್ ಮ್ಯಾನ್ ಭದ್ರತೆ

0
5

ಕೋಲಾರ: ಜಿಲ್ಲೆಯ ಸರ್ಕಾರಿ ಅಧಿಕಾರಿ-ನೌಕರರಿಗೆ ಇನ್ನು ಮುಂದೆ ಗನ್ಮನ್ ಬೆಂಗಾವಲು ಸಿಗಲಿದೆ. ನಿರ್ದಿಷ್ಟ ಪ್ರಕರಣಗಳ ತನಿಖೆ ಅಥವ ಪರಿಶೀಲನೆಗಾಗಿ ತೆರಳುವ ಸರ್ಕಾರಿ ನೌಕರರಿಗೆ ಗನ್ಮನ್ ಜೊತೆಯಾಗಿ ಇರಲಿದ್ದಾರೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಬಕಾರಿ ಸಚಿವ ಎಚ್.ನಾಗೇಶ ತಿಳಿಸಿದ್ದಾರೆ.

ಕಳೆದ ವಾರ ಬಂಗಾರಪೇಟೆ ತಾಲೂಕಿನ ಜಮೀನೊಂದ್ರ ಅಳತೆ ನಡೆಸುವ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರು ಕೊಲೆಯಾಗಿದ್ದರು. ಕಾಮ ಸಮುದ್ರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಪೇದೆಗಳೂ ಆ ವೇಳೆಯಲ್ಲಿ ಜಾಗದಲ್ಲಿದ್ರು. ಇಷ್ಟೆಲ್ಲ ವ್ಯವಸ್ಥೆಯಿದ್ರೂ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರ ಮೇಲೆ ಎರಗಿದ ಆರೋಪಿಯೊಬ್ಬ ಚಾಕುವಿನಿಂದ ಅವ್ರನ್ನು ಇರಿದು ಕೊಂದು ಹಾಕಿದ್ದ ಪ್ರಕರಣವು ನಡೆದುಹೋಗಿತ್ತು.

ಈ ಹಿನ್ನಲೆಯಲ್ಲಿ ಕೋಲಾರ ಉಸ್ತುವಾರಿ ಸಚಿವ ಎಚ್.ನಾಗೇಶ ಅವರು ಇದೀಗ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನವನ್ನು ಕೊಟ್ಟಿದ್ದಾರೆ. ಇನ್ನು ಮುಂದೆ ಕೋಲಾರ ಜಿಲ್ಲೆಯ ಸರ್ಕಾರಿ ಅಧಿಕಾರಿ-ನೌಕರರು ತಮ್ಮ ಕರ್ತವ್ಯ ನಿರ್ವಹಣೆಯ ವೇಳೆಯಲ್ಲಿ ಗನ್ಮನ್ ಬೆಂಗಾವಲು ಪಡೆದುಕೊಳ್ಳಬಹುದು. ಸಕಾರಿ ನೌಕರರ ಮೇಲೆ ತಿರುಗಿ ಬೀಳುವವರ ಮೇಲೆ ಸ್ಥಳದಲ್ಲೇ ಕ್ರಮ ಜರುಗಿಸೋದು ಅನಿವಾರ್ಯವಾಗಿದೆ ಅಂತ ಸಚಿವರು ಸಮರ್ಥನೆ ಕೊಟ್ಟಿದ್ದಾರೆ.

- Call for authors -

LEAVE A REPLY

Please enter your comment!
Please enter your name here